<p><strong>ಚಿಕ್ಕೇರೂರ</strong> (ಹಂಸಬಾವಿ): ಮೀನುಗಾರಿಕೆ ಉತ್ತಮ ಆದಾಯ ತರುವ ಉದ್ಯಮವಾಗಿದೆ ಹಾಗೂ ಕಂಪನಿಗಳು ಮತ್ತು ಸಹಕಾರಿ ಸಂಘಗಳು ಮೀನಿನ ಉತ್ಪನ್ನಗಳನ್ನ ಮೌಲ್ಯವರ್ಧನೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಹಾಗೂ ಇಲಾಖೆಯ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ ಹೇಳಿದರು.</p>.<p>ಸಮೀಪದ ಚಿಕ್ಕೇರೂರಿನಲ್ಲಿ ಮೀನುಗಾರಿಕೆ ಇಲಾಖೆ ಹಾವೇರಿ, ಸ್ಕೂಡ್ ವೇಸ್ ಸಂಪನ್ಮೂಲ ಸಂಸ್ಥೆ ಶಿರಸಿ ಹಾಗೂ ಕಾರ್ಪ್ ಫಿಶ್ ರೈತ ಉತ್ಪಾದಕ ಕಂಪನಿ ಚಿಕ್ಕೇರೂರ್ ಇವರು ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಹಾಯಕ ಮೀನುಗಾರಿಕಾ ನಿರ್ದೇಶಕ ಎಸ್.ಪಿ. ದಂದೂರ ಮಾತನಾಡಿ, ಮೀನುಗಾರಿಕೆ ಕೃಷಿ ಒಂದು ಆರ್ಥಿಕ ಸ್ವಾವಲಂಬನೆ ಸಾಧಿಸಲು, ಮೀನುಗಾರಿಕೆ ಉದ್ಯಮ ಆರಂಭಿಸಲು ನವ ಉದ್ಯಮಿಗಳು ಮುಂದಾಗಬೇಕೆಂದು ತಿಳಿಸಿದರು.</p>.<p>ಸ್ಕೂಡ್ ವೆಸ್ ಸಂಪನ್ಮೂಲ ಸಂಸ್ಥೆಯ ಜಿಲ್ಲಾ ಸಂಯೋಜಕ ಜಗದೀಶ್ ಮಡಿವಾಳರ್, ಗದಗ ಜಿಲ್ಲಾ ಸಂಯೋಜಕ ನರಸಪ್ಪ ಮಡಿವಾಳ, ಕಂಪನಿಯ ಅಧ್ಯಕ್ಷ ಸಿಕಂದರ್ ಎಂ. ಗಾಸಿ, ಸಹಾಯಕ ಮೀನುಗಾರಿಕಾ ನಿರ್ದೇಶಕ ವಿನಾಯಕ ಬೇವಿನಹಳ್ಳಿ ಮಾತನಾಡಿದರು.</p>.<p>ಮೀನುಗಾರಿಕೆ ಸಹಕಾರಿ ಸಂಘದ ಪ್ರವರ್ತಕ ರಿಯಾಜ್ ಘಾಸಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೇರೂರ</strong> (ಹಂಸಬಾವಿ): ಮೀನುಗಾರಿಕೆ ಉತ್ತಮ ಆದಾಯ ತರುವ ಉದ್ಯಮವಾಗಿದೆ ಹಾಗೂ ಕಂಪನಿಗಳು ಮತ್ತು ಸಹಕಾರಿ ಸಂಘಗಳು ಮೀನಿನ ಉತ್ಪನ್ನಗಳನ್ನ ಮೌಲ್ಯವರ್ಧನೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಹಾಗೂ ಇಲಾಖೆಯ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಕೊಪ್ಪದ ಹೇಳಿದರು.</p>.<p>ಸಮೀಪದ ಚಿಕ್ಕೇರೂರಿನಲ್ಲಿ ಮೀನುಗಾರಿಕೆ ಇಲಾಖೆ ಹಾವೇರಿ, ಸ್ಕೂಡ್ ವೇಸ್ ಸಂಪನ್ಮೂಲ ಸಂಸ್ಥೆ ಶಿರಸಿ ಹಾಗೂ ಕಾರ್ಪ್ ಫಿಶ್ ರೈತ ಉತ್ಪಾದಕ ಕಂಪನಿ ಚಿಕ್ಕೇರೂರ್ ಇವರು ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಹಾಯಕ ಮೀನುಗಾರಿಕಾ ನಿರ್ದೇಶಕ ಎಸ್.ಪಿ. ದಂದೂರ ಮಾತನಾಡಿ, ಮೀನುಗಾರಿಕೆ ಕೃಷಿ ಒಂದು ಆರ್ಥಿಕ ಸ್ವಾವಲಂಬನೆ ಸಾಧಿಸಲು, ಮೀನುಗಾರಿಕೆ ಉದ್ಯಮ ಆರಂಭಿಸಲು ನವ ಉದ್ಯಮಿಗಳು ಮುಂದಾಗಬೇಕೆಂದು ತಿಳಿಸಿದರು.</p>.<p>ಸ್ಕೂಡ್ ವೆಸ್ ಸಂಪನ್ಮೂಲ ಸಂಸ್ಥೆಯ ಜಿಲ್ಲಾ ಸಂಯೋಜಕ ಜಗದೀಶ್ ಮಡಿವಾಳರ್, ಗದಗ ಜಿಲ್ಲಾ ಸಂಯೋಜಕ ನರಸಪ್ಪ ಮಡಿವಾಳ, ಕಂಪನಿಯ ಅಧ್ಯಕ್ಷ ಸಿಕಂದರ್ ಎಂ. ಗಾಸಿ, ಸಹಾಯಕ ಮೀನುಗಾರಿಕಾ ನಿರ್ದೇಶಕ ವಿನಾಯಕ ಬೇವಿನಹಳ್ಳಿ ಮಾತನಾಡಿದರು.</p>.<p>ಮೀನುಗಾರಿಕೆ ಸಹಕಾರಿ ಸಂಘದ ಪ್ರವರ್ತಕ ರಿಯಾಜ್ ಘಾಸಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>