<p><strong>ಹಾನಗಲ್:</strong> ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು, ಪ್ರವಾಸಕ್ಕೆ ತೆರಳಿರುವ ಹಾನಗಲ್ನ 27 ಜನರು ಜಮ್ಮುವಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ.</p><p>‘ಜಮ್ಮುವಿನ ಕಾಟ್ರಾ ವೈಷ್ಣೋದೇವಿ ದೇವಸ್ಥಾನದಲ್ಲಿ ಹಾನಗಲ್ ಪ್ರವಾಸಿಗರು ಇದ್ದಾರೆ’ ಎಂದು ಕುಟುಂಬದವರು ತಿಳಿಸಿದ್ದಾರೆ. ಶಿವಮೊಗ್ಗದ ಏಜೆನ್ಸಿಯೊಂದರ ಮೂಲಕ ಅವರು ಏಪ್ರಿಲ್ 17ರಂದು ಹಾನಗಲ್ನಿಂದ ಜಮ್ಮು–ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.</p><p>ಏ. 22ರಂದು ಮಂಗಳವಾರ ಬೆಳಿಗ್ಗೆ ಬಸ್ ಮೂಲಕ ಅಮೃತಸರದಿಂದ ಜಮ್ಮುವಿಗೆ ಪ್ರಯಾಣಿಸಿದ್ದ ಪ್ರವಾಸಿಗರು, ಬುಧವಾರ (ಏಪ್ರಿಲ್ 23) ಪಹಲ್ಗಾಮ್ ಭೇಟಿ ಮಾಡುವ ಕಾರ್ಯಕ್ರಮವಿತ್ತು. ಉಗ್ರರ ದಾಳಿಯ ಸುದ್ದಿ ತಿಳಿದು, ಕಾಟ್ರಾ ವೈಷ್ಣೋದೇವಿ ದೇವಸ್ಥಾನದಲ್ಲಿಯೇ ಹಾನಗಲ್ ಜನರು ಉಳಿದುಕೊಂಡಿರುವುದಾಗಿ ಗೊತ್ತಾಗಿದೆ.</p><p>ಹಾನಗಲ್ ನಿವಾಸಿಗಳಾದ ರುದ್ರಗೌಡ ಪಿ., ಮನೋಹರ ಬಳಿಗಾರ, ಸುರೇಶ ಸಿಂಧೂರ, ಜಾಧವ, ಉಪ್ಪಿನ್, ಶಂಕರ ಹಾದಿಮನಿ, ಕುಮಾರ ಹತ್ತಿಕಾಳ, ನಾಗರಾಜ ಮಿರ್ಜಿ, ಕೆರೆಸ್ವಾಮಿ ಕೆ.ಪಿ., ವಿರೇಶ ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ.</p><p>‘ಮಂಗಳವಾರ ಮಧ್ಯಾಹ್ನ ಪೋನ್ ಆನ್ ಇತ್ತು. ಆ ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಏಜೆನ್ಸಿಯ ವ್ಯವಸ್ಥಾಪಕರು, ಸಂಪರ್ಕದಲ್ಲಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕೆರೆಸ್ವಾಮಿ ಪುತ್ರ ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಏ. 27ರ ತನಕ ಪ್ರವಾಸ ಮುಂದುವರೆಯಬೇಕಿತ್ತು. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಪ್ರವಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಲಾಗಿದೆ.</p>.Pahalgam Terror Attack: ಅಮೆರಿಕ, ಪೆರು ಪ್ರವಾಸ ಮೊಟಕುಗೊಳಿಸಿದ ನಿರ್ಮಲಾ.Pahalgam Terror Attack: ಉಗ್ರರ ದಾಳಿ ಕೈವಾಡ ನಿರಾಕರಿಸಿದ ಪಾಕ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು, ಪ್ರವಾಸಕ್ಕೆ ತೆರಳಿರುವ ಹಾನಗಲ್ನ 27 ಜನರು ಜಮ್ಮುವಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ.</p><p>‘ಜಮ್ಮುವಿನ ಕಾಟ್ರಾ ವೈಷ್ಣೋದೇವಿ ದೇವಸ್ಥಾನದಲ್ಲಿ ಹಾನಗಲ್ ಪ್ರವಾಸಿಗರು ಇದ್ದಾರೆ’ ಎಂದು ಕುಟುಂಬದವರು ತಿಳಿಸಿದ್ದಾರೆ. ಶಿವಮೊಗ್ಗದ ಏಜೆನ್ಸಿಯೊಂದರ ಮೂಲಕ ಅವರು ಏಪ್ರಿಲ್ 17ರಂದು ಹಾನಗಲ್ನಿಂದ ಜಮ್ಮು–ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.</p><p>ಏ. 22ರಂದು ಮಂಗಳವಾರ ಬೆಳಿಗ್ಗೆ ಬಸ್ ಮೂಲಕ ಅಮೃತಸರದಿಂದ ಜಮ್ಮುವಿಗೆ ಪ್ರಯಾಣಿಸಿದ್ದ ಪ್ರವಾಸಿಗರು, ಬುಧವಾರ (ಏಪ್ರಿಲ್ 23) ಪಹಲ್ಗಾಮ್ ಭೇಟಿ ಮಾಡುವ ಕಾರ್ಯಕ್ರಮವಿತ್ತು. ಉಗ್ರರ ದಾಳಿಯ ಸುದ್ದಿ ತಿಳಿದು, ಕಾಟ್ರಾ ವೈಷ್ಣೋದೇವಿ ದೇವಸ್ಥಾನದಲ್ಲಿಯೇ ಹಾನಗಲ್ ಜನರು ಉಳಿದುಕೊಂಡಿರುವುದಾಗಿ ಗೊತ್ತಾಗಿದೆ.</p><p>ಹಾನಗಲ್ ನಿವಾಸಿಗಳಾದ ರುದ್ರಗೌಡ ಪಿ., ಮನೋಹರ ಬಳಿಗಾರ, ಸುರೇಶ ಸಿಂಧೂರ, ಜಾಧವ, ಉಪ್ಪಿನ್, ಶಂಕರ ಹಾದಿಮನಿ, ಕುಮಾರ ಹತ್ತಿಕಾಳ, ನಾಗರಾಜ ಮಿರ್ಜಿ, ಕೆರೆಸ್ವಾಮಿ ಕೆ.ಪಿ., ವಿರೇಶ ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ.</p><p>‘ಮಂಗಳವಾರ ಮಧ್ಯಾಹ್ನ ಪೋನ್ ಆನ್ ಇತ್ತು. ಆ ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಏಜೆನ್ಸಿಯ ವ್ಯವಸ್ಥಾಪಕರು, ಸಂಪರ್ಕದಲ್ಲಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕೆರೆಸ್ವಾಮಿ ಪುತ್ರ ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.</p><p>ಏ. 27ರ ತನಕ ಪ್ರವಾಸ ಮುಂದುವರೆಯಬೇಕಿತ್ತು. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಪ್ರವಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಲಾಗಿದೆ.</p>.Pahalgam Terror Attack: ಅಮೆರಿಕ, ಪೆರು ಪ್ರವಾಸ ಮೊಟಕುಗೊಳಿಸಿದ ನಿರ್ಮಲಾ.Pahalgam Terror Attack: ಉಗ್ರರ ದಾಳಿ ಕೈವಾಡ ನಿರಾಕರಿಸಿದ ಪಾಕ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>