ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಂಡಾರಹಳ್ಳಿಯ ಆಟೊ ಚಾಲಕ ಅಭಿಲಾಷ ನೀಲಕಂಠಪ್ಪ (27) ಮತ್ತು ಅದೇ ಗ್ರಾಮದ ಕಾರು ಚಾಲಕ ಅಜಯ ಕೃಷ್ಣಮೂರ್ತಿ (24) ಎಂಬುವವರು ಬಂಧಿತರು. ಆರೋಪಿಗಳಿಂದ ₹22,900 ಮೌಲ್ಯದ 458 ಗ್ರಾಂ ಗಾಂಜಾ, ಡಿಜಿಟಲ್ ತೂಕದ ಯಂತ್ರ, ಮೊಬೈಲ್ ಫೋನ್, ಆಟೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.