<p><strong>ಹಾವೇರಿ:</strong> ನಗರದಲ್ಲಿ ಸರಕುಗಳ ಲೋಡ್ ಹಾಗೂ ಅನ್ಲೋಡ್ ಸಮಯ ನಿಗದಿಗೆ ವ್ಯಾಪಾರಸ್ಥರು ಪ್ರತ್ಯೇಕ ಸಭೆ ನಡೆಸಿ ಸಮಯ ತಿಳಿಸಿದರೆ ಈ ಕುರಿತಂತೆ ಚರ್ಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.</p>.<p>ಸೋಮವಾರ ಹಾವೇರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಗರದ ಸುಗಮ ಸಂಚಾರ ವ್ಯವಸ್ಥ ಕುರಿತಂತೆ ಆಯೋಜಿಸಿದ್ದ ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿಶ್ಯಬ್ದ ವಲಯ, ಏಕಮುಖ ಸಂಚಾರ ಮಾರ್ಗಗಳು, ವಾಹನ ನಿಲುಗಡೆ ಸ್ಥಳ ಹಾಗೂ ಲೋಡ್-ಅನ್ಲೋಡ್ ಸಮಯ ಕುರಿತ ಅಧಿಸೂಚನೆ ಮೇಲೆ ಸುದೀರ್ಘವಾದ ಚರ್ಚೆಗಳು ನಡೆದು ಹಲವು ಸಲಹೆಗಳು ವ್ಯಕ್ತವಾದರು.</p>.<p>ಜಿಲ್ಲಾಧಿಕಾರಿ ಹೊರಡಿಸಿರುವ ನಗರ ಸಂಚಾರ ವ್ಯವಸ್ಥೆಯ ಅಧಿಸೂಚನೆ 1ರಿಂದ 4ರವರೆಗೆ ಯಾವುದೇ ಬದಲಾವಣೆ ಇಲ್ಲದೆ ವ್ಯಾಪಾರಸ್ಥರು ಸಹಮತ ವ್ಯಕ್ತಪಡಿಸಿದರು. ಆದರೆ, ಲೋಡ್-ಅನ್ಲೋಡ್ ಮಾಡಲು ನಿಗದಿಪಡಿಸಿರುವ ಸಮಯದಲ್ಲಿ ಹಮಾಲರು ಸೇರಿದಂತೆ ಕಾರ್ಮಿಕರ ಸಮಸ್ಯೆ ಕಾರಣ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುವುದಾಗಿ ಸಭೆಯ ಗಮನ ಸೆಳೆದರು.</p>.<p>ಖಾಸಗಿ ವಾಹನಗಳು, ಟ್ಯಾಕ್ಸಿಗಳ ನಿಲುಗಡೆ, ಹಲವು ಸಂಚಾರ ದಟ್ಟಣೆ ಸ್ಥಳಗಳಲ್ಲಿ ಟ್ರಾಫಿಕ್ ಪೋಲಿಸ್ಗಳ ನೇಮಕ, ಬೀದಿಬದಿ ವ್ಯಾಪಾರಸ್ಥರಿಗೆ ಸ್ಥಳ ಗುರುತಿಸುವಿಕೆ, ಕಳ್ಳತನ ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ದುರಸ್ತಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.</p>.<p>ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ನಗರಸಭೆ ಉಪಾಧ್ಯಕ್ಷರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ನಗರದಲ್ಲಿ ಸರಕುಗಳ ಲೋಡ್ ಹಾಗೂ ಅನ್ಲೋಡ್ ಸಮಯ ನಿಗದಿಗೆ ವ್ಯಾಪಾರಸ್ಥರು ಪ್ರತ್ಯೇಕ ಸಭೆ ನಡೆಸಿ ಸಮಯ ತಿಳಿಸಿದರೆ ಈ ಕುರಿತಂತೆ ಚರ್ಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.</p>.<p>ಸೋಮವಾರ ಹಾವೇರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಗರದ ಸುಗಮ ಸಂಚಾರ ವ್ಯವಸ್ಥ ಕುರಿತಂತೆ ಆಯೋಜಿಸಿದ್ದ ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿಶ್ಯಬ್ದ ವಲಯ, ಏಕಮುಖ ಸಂಚಾರ ಮಾರ್ಗಗಳು, ವಾಹನ ನಿಲುಗಡೆ ಸ್ಥಳ ಹಾಗೂ ಲೋಡ್-ಅನ್ಲೋಡ್ ಸಮಯ ಕುರಿತ ಅಧಿಸೂಚನೆ ಮೇಲೆ ಸುದೀರ್ಘವಾದ ಚರ್ಚೆಗಳು ನಡೆದು ಹಲವು ಸಲಹೆಗಳು ವ್ಯಕ್ತವಾದರು.</p>.<p>ಜಿಲ್ಲಾಧಿಕಾರಿ ಹೊರಡಿಸಿರುವ ನಗರ ಸಂಚಾರ ವ್ಯವಸ್ಥೆಯ ಅಧಿಸೂಚನೆ 1ರಿಂದ 4ರವರೆಗೆ ಯಾವುದೇ ಬದಲಾವಣೆ ಇಲ್ಲದೆ ವ್ಯಾಪಾರಸ್ಥರು ಸಹಮತ ವ್ಯಕ್ತಪಡಿಸಿದರು. ಆದರೆ, ಲೋಡ್-ಅನ್ಲೋಡ್ ಮಾಡಲು ನಿಗದಿಪಡಿಸಿರುವ ಸಮಯದಲ್ಲಿ ಹಮಾಲರು ಸೇರಿದಂತೆ ಕಾರ್ಮಿಕರ ಸಮಸ್ಯೆ ಕಾರಣ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುವುದಾಗಿ ಸಭೆಯ ಗಮನ ಸೆಳೆದರು.</p>.<p>ಖಾಸಗಿ ವಾಹನಗಳು, ಟ್ಯಾಕ್ಸಿಗಳ ನಿಲುಗಡೆ, ಹಲವು ಸಂಚಾರ ದಟ್ಟಣೆ ಸ್ಥಳಗಳಲ್ಲಿ ಟ್ರಾಫಿಕ್ ಪೋಲಿಸ್ಗಳ ನೇಮಕ, ಬೀದಿಬದಿ ವ್ಯಾಪಾರಸ್ಥರಿಗೆ ಸ್ಥಳ ಗುರುತಿಸುವಿಕೆ, ಕಳ್ಳತನ ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ದುರಸ್ತಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.</p>.<p>ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ನಗರಸಭೆ ಉಪಾಧ್ಯಕ್ಷರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>