‘ಹನುಮಂತಪ್ಪ ಲಮಾಣಿಯು ಪತ್ನಿ ತೀರಿಕೊಂಡ ಬಳಿಕ ಆತನ ಅಣ್ಣ ಶಂಕ್ರಪ್ಪ ಲಮಾಣಿ ಕುಟುಂಬದ ಜತೆಯಲ್ಲಿ ವಾಸವಾಗಿದ್ದ. ಹನುಮಂತಪ್ಪನು ಅತ್ತಿಗೆಯೊಂದಿಗೆ ಸಲುಗೆಯಿಂದ ಇರುವುದು ಮತ್ತು ಒಟ್ಟಿಗೆ ಕೂಲಿ ಕೆಲಸಕ್ಕೆ ಹೋಗಿ ಬಂದು ಮಾಡುತ್ತಿದ್ದರು. ಇವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಇರಬಹುದು ಎಂದು ಶಂಕ್ರಪ್ಪನು ತಮ್ಮ ಮತ್ತು ಪತ್ನಿಯೊಂದಿಗೆ ಆಗಾಗ್ಗೆ ಜಗಳ ಮಾಡಿಕೊಂಡು ಬಂದಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಿಟ್ಟು ಮತ್ತು ಸಂಶಯದಿಂದ ಮನೆಯ ಅಂಗಳದಲ್ಲಿ ಮಲಗಿದ್ದ ತಮ್ಮ ಹನುಮಂತಪ್ಪನನ್ನು ಶಂಕ್ರಪ್ಪ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.