ನಗರಸಭೆಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ನೋಟಿಸ್ ನೀಡಿ, ಆನ್ಲೈನ್ ಬ್ಯಾಂಕ್ ಚಲನ್ ಮುಖಾಂತರ ನಿಗದಿತ ಖಾತೆಗೆ ಸಂದಾಯ ಮಾಡಿಸಿಕೊಳ್ಳಲಾಗುವುದು. ಕಾರಣ ಸಾರ್ವಜನಿಕರು ಸುಳ್ಳು ವದಂತಿಗಳನ್ನು ಕೇಳಿ ಮೂರನೇ ವ್ಯಕ್ತಿಯ ಕೈಯಲ್ಲಿ ಹಣ ಕೊಡಬಾರದು. ಒಂದು ವೇಳೆ ದುಡ್ಡು ಕೊಟ್ಟರೆ ಅದಕ್ಕೆ ನಗರಸಭೆ ಹೊಣೆಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.