<p><strong>ಹಿರೇಕೆರೂರ:</strong> ಆರೋಗ್ಯಕರ ಪರಿಸರ, ಆರ್ಥಿಕ ಲಾಭಕ್ಕೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಸಾವಯುವ ಕೃಷಿ ಅನೂಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜು ಲಮಾಣಿ ಹೇಳಿದರು.</p>.<p>ತಾಲ್ಲೂಕಿನ ಚನ್ನಳ್ಳಿ ತಾಂಡಾ ಗ್ರಾಮದಲ್ಲಿ ಮನು ವಿಕಾಸ ಸಂಸ್ಥೆ ಕರ್ಜಗಿ ಮತ್ತು ಈಡಲ್ಗಿವ್ ಫೌಂಡೇಷನ್ ಸಹಭಾಗಿತ್ವದಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಸುಸ್ಥಿರ ಕೃಷಿ ತರಬೇತಿ ಹಮ್ಮಿಕೊಂಡಿದ್ದು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸಂಪನ್ಮೂಲ ವ್ಯಕ್ತಿ ಸಾವಯುವ ಕೃಷಿಯಲ್ಲಿ ತೊಡಗಿದ ರೈತ ಚನ್ನಬಸಪ್ಪ ಎಸ್. ಶಿರೂರ ಸಾವಯವ ಕೃಷಿ ಮತ್ತು ಅದರ ಪ್ರಯೋಜನಗಳು ಹಾಗೂ ಅತಿಯಾದ ಕ್ರಿಮಿನಾಶಕಗಳು ಮತ್ತು ರಸಗೊಬ್ಬರ ಇವುಗಳ ಬಗ್ಗೆ ತರಬೇತಿಯನ್ನು ನೀಡಿದರು.</p>.<p>ಮಲ್ಲೇಶ ಲಮಾಣಿ ,ಲಲಿತಮ್ಮ , ರಾಜಣ್ಣ ಬುರಡಿಕಟ್ಟಿ , ಕಾಮಾಕ್ಷಿ ರೇವಣಕರ , ನವೀನ್ ಹುಲ್ಲತ್ತಿ , ಹುತ್ತೇಶ ಲಮಾಣಿ , ಬಸವರಾಜ ಗುಡದಳ್ಳಿ, ಕುಸುಮಾ ಕೋಟಗದ್ದೆ , ಶ್ರುತಿ ಲಮಾಣಿ ಮತ್ತು ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ:</strong> ಆರೋಗ್ಯಕರ ಪರಿಸರ, ಆರ್ಥಿಕ ಲಾಭಕ್ಕೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಸಾವಯುವ ಕೃಷಿ ಅನೂಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜು ಲಮಾಣಿ ಹೇಳಿದರು.</p>.<p>ತಾಲ್ಲೂಕಿನ ಚನ್ನಳ್ಳಿ ತಾಂಡಾ ಗ್ರಾಮದಲ್ಲಿ ಮನು ವಿಕಾಸ ಸಂಸ್ಥೆ ಕರ್ಜಗಿ ಮತ್ತು ಈಡಲ್ಗಿವ್ ಫೌಂಡೇಷನ್ ಸಹಭಾಗಿತ್ವದಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಸುಸ್ಥಿರ ಕೃಷಿ ತರಬೇತಿ ಹಮ್ಮಿಕೊಂಡಿದ್ದು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸಂಪನ್ಮೂಲ ವ್ಯಕ್ತಿ ಸಾವಯುವ ಕೃಷಿಯಲ್ಲಿ ತೊಡಗಿದ ರೈತ ಚನ್ನಬಸಪ್ಪ ಎಸ್. ಶಿರೂರ ಸಾವಯವ ಕೃಷಿ ಮತ್ತು ಅದರ ಪ್ರಯೋಜನಗಳು ಹಾಗೂ ಅತಿಯಾದ ಕ್ರಿಮಿನಾಶಕಗಳು ಮತ್ತು ರಸಗೊಬ್ಬರ ಇವುಗಳ ಬಗ್ಗೆ ತರಬೇತಿಯನ್ನು ನೀಡಿದರು.</p>.<p>ಮಲ್ಲೇಶ ಲಮಾಣಿ ,ಲಲಿತಮ್ಮ , ರಾಜಣ್ಣ ಬುರಡಿಕಟ್ಟಿ , ಕಾಮಾಕ್ಷಿ ರೇವಣಕರ , ನವೀನ್ ಹುಲ್ಲತ್ತಿ , ಹುತ್ತೇಶ ಲಮಾಣಿ , ಬಸವರಾಜ ಗುಡದಳ್ಳಿ, ಕುಸುಮಾ ಕೋಟಗದ್ದೆ , ಶ್ರುತಿ ಲಮಾಣಿ ಮತ್ತು ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>