ಶನಿವಾರ ಆರ್ಯವೈಶ್ಯ ಸಮುದಾಯದವರು ವಾಸವಿ ಜಯಂತಿ ಆಚರಿಸಿದರು. ಅವರ ಎಲ್ಲಾ ಬಗೆಯ ಅಂಗಡಿಗಳು ಬಂದ್ ಆಗಿದ್ದವು.ಪಟ್ಟಣದಲ್ಲಿ ಇರುವ ಔಷಧಿ ಅಂಗಡಿಗಳ ಪೈಕಿ 10 ಪ್ರಮುಖ ಔಷಧಿ ಅಂಗಡಿಗಳು ಆರ್ಯವೈಶ್ಯರದ್ದಾಗಿದ್ದು ಇವುಗಳು ಬಂದ್ ಆಗಿದ್ದರಿಂದ ರೋಗಿಗಳು ಪರದಾಡಿದರು. ‘ ನಾನು ನನ್ನ ಮಾಮೂಲಿ ಅಂಗಡಿಗೆ ವೈದ್ಯರು ನೀಡಿದ್ದ ಚೀಟಿ ಕೊಟ್ಟು ನಿತ್ಯ ಅದನ್ನೇ ತೆಗೆದುಕೊಳ್ಳುತ್ತಿದ್ದೆ. ಅದು ಯಾವುದೆಂದು ಹೆಸರು ಗೊತ್ತಿಲ್ಲ. ನಾನು ಇವತ್ತು ಔಷಧಿ ತೆಗೆದುಕೊಳ್ಳದಿದ್ದರೆ ನನ್ನ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿ ಆಗಿ ತೊಂದರೆ ಆಗುತ್ತದೆ’ ಎಂದು ರಾಮಪ್ಪ ಎಂಬುವವರು ಕೊರಗಿದರು.