<p><strong>ಹಾವೇರಿ: </strong>‘ಶಿಲ್ಪಕಲೆಯಲ್ಲಿ ಅನನ್ಯ ಸಾಧನೆ ಮಾಡಿದ ಡಾ.ಟಿ.ಬಿ.ಸೊಲಬಕ್ಕನವರ ಅವರು ಕೇವಲ ವ್ಯಕ್ತಿಯಾಗಿರಲಿಲ್ಲ, ಶಕ್ತಿಯಾಗಿದ್ದರು’ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಶ್ರೀಶೈಲ ಹುದ್ದಾರ ಅಭಿಪ್ರಾಯಪಟ್ಟರು.</p>.<p>ಹಾವೇರಿಯ ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಏರ್ಪಡಿಸಿದ್ದ ‘ಡಾ.ಟಿ.ಬಿ.ಸೊಲಬಕ್ಕನವರ ಅವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ‘ಸೊಲಬಕ್ಕನವರ ಅವರ ಸರಳ ಜೀವನ, ಉದಾತ್ತ ವಿಚಾರಗಳು, ಅನನ್ಯ ಸಾಧನೆ ಪ್ರತಿಯೊಬ್ಬರಿಗೂ ಅನುಕರಣೀಯ. ಅವರೊಬ್ಬ ತ್ಯಾಗಮಯಿಯಾಗಿದ್ದು, ಆದರ್ಶಯುತ ಜೀವನ ನಡೆಸಿದರು ಎಂದು ತಿಳಿಸಿದರು.</p>.<p>ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಬಸರಕೋಡ್, ಕಲಾವಿದ ಕರಿಯಪ್ಪ ಹಂಚಿನಮನೆ, ನವಚೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಾಗೇದ್ರ ಮಾಳಿ, ಕೆ.ಪಿ.ಎಸ್ ಶಾಲೆಯ ಗೌರವಾಧ್ಯಕ್ಷರಾದ ಚಂದ್ರಕಲಾ ಮಾಳಿ ಭಾಗವಹಿಸಿದ್ದರು.</p>.<p>ಕೆ.ಪಿ.ಎಸ್ ಶಾಲೆಯ ನಿರ್ದೇಶಕ ವಿಜಯಕುಮಾರ ದೊಡ್ಡವಾಡ, ಕಲಾವಿದರಾದ ವೀರೆಂದ್ರ ಮಾಳಿ, ಅಶೋಕ ಹೊಸಮನಿ ಮಾತನಾಡಿದರು. ಶಾಲೆಯ ಆಡಳಿತ ಅಧಿಕಾರಿ ಸೌಮ್ಯ ಮಾಳಿ, ಪ್ರಾಚಾರ್ಯರಾದ ಮಂಜುನಾಥ ಬಿ.ಎಸ್. ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>‘ಶಿಲ್ಪಕಲೆಯಲ್ಲಿ ಅನನ್ಯ ಸಾಧನೆ ಮಾಡಿದ ಡಾ.ಟಿ.ಬಿ.ಸೊಲಬಕ್ಕನವರ ಅವರು ಕೇವಲ ವ್ಯಕ್ತಿಯಾಗಿರಲಿಲ್ಲ, ಶಕ್ತಿಯಾಗಿದ್ದರು’ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಶ್ರೀಶೈಲ ಹುದ್ದಾರ ಅಭಿಪ್ರಾಯಪಟ್ಟರು.</p>.<p>ಹಾವೇರಿಯ ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಏರ್ಪಡಿಸಿದ್ದ ‘ಡಾ.ಟಿ.ಬಿ.ಸೊಲಬಕ್ಕನವರ ಅವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ‘ಸೊಲಬಕ್ಕನವರ ಅವರ ಸರಳ ಜೀವನ, ಉದಾತ್ತ ವಿಚಾರಗಳು, ಅನನ್ಯ ಸಾಧನೆ ಪ್ರತಿಯೊಬ್ಬರಿಗೂ ಅನುಕರಣೀಯ. ಅವರೊಬ್ಬ ತ್ಯಾಗಮಯಿಯಾಗಿದ್ದು, ಆದರ್ಶಯುತ ಜೀವನ ನಡೆಸಿದರು ಎಂದು ತಿಳಿಸಿದರು.</p>.<p>ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ಬಸರಕೋಡ್, ಕಲಾವಿದ ಕರಿಯಪ್ಪ ಹಂಚಿನಮನೆ, ನವಚೇತನ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಾಗೇದ್ರ ಮಾಳಿ, ಕೆ.ಪಿ.ಎಸ್ ಶಾಲೆಯ ಗೌರವಾಧ್ಯಕ್ಷರಾದ ಚಂದ್ರಕಲಾ ಮಾಳಿ ಭಾಗವಹಿಸಿದ್ದರು.</p>.<p>ಕೆ.ಪಿ.ಎಸ್ ಶಾಲೆಯ ನಿರ್ದೇಶಕ ವಿಜಯಕುಮಾರ ದೊಡ್ಡವಾಡ, ಕಲಾವಿದರಾದ ವೀರೆಂದ್ರ ಮಾಳಿ, ಅಶೋಕ ಹೊಸಮನಿ ಮಾತನಾಡಿದರು. ಶಾಲೆಯ ಆಡಳಿತ ಅಧಿಕಾರಿ ಸೌಮ್ಯ ಮಾಳಿ, ಪ್ರಾಚಾರ್ಯರಾದ ಮಂಜುನಾಥ ಬಿ.ಎಸ್. ಮುಂತಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>