ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಕ್ಕೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಾಗಿ ತುತ್ತಾಗುತ್ತಿದ್ದಾರೆ.ಸೈಬರ್ ಅಪರಾಧ ಹೆಚ್ಚಾಗಿ ಮೊಬೈಲ್ನಿಂದ ಆಗುತ್ತಿದ್ದು, ಮೊಬೈಲ್ ಬಳಸುವಾಗ ಎಚ್ಚರಿಕೆ ವಹಿಸಬೇಕು. ಬ್ಯಾಂಕಿನ ಮ್ಯಾನೇಜರ್ ಅಥವಾ ಸಿಬ್ಬಂದಿ ತಮ್ಮ ಬ್ಯಾಂಕ್ ವಿವರಗಳನ್ನು ಎಂದಿಗೂ ಕೇಳುವುದಿಲ್ಲ, ತಮಗೆ ಯಾವುದೇ ಮೊಬೈಲ್ ಕರೆಯಿಂದ ಬ್ಯಾಂಕ್ ವಿವರ ಕೇಳಿದರೆ ನೀಡಬಾರದು. ಎ.ಟಿ.ಎಂ ಪಿನ್ ಹಾಕುವಾಗ ಜಾಗರೂಕತೆ ವಹಿಸಬೇಕು. ಯಾವುದೇ ಅನಾಮಧೇಯ ಕರೆಗಳಿಗೆ ತಮ್ಮ ಬ್ಯಾಂಕ್ ವಿವರ ನೀಡಬಾರದು ಎಂದರು.