<p><strong>ತಡಸ</strong>: ಸಮೀಪದ ಧುಂಡಶಿ ಹೋಬಳಿಯಲ್ಲಿ ಒಟ್ಟು ಕೃಷಿ ಭೂಮಿ 12,840 ಹೆಕ್ಟೇರ್ ಇದ್ದು, ಕಳೆದ ವರ್ಷ 300 ಹೆಕ್ಟೇರ್ ಪ್ರದೇಶದಲ್ಲಿದ್ದ ಶುಂಠಿ ಬೆಳೆಯು, ಈ ವರ್ಷ 800 ಹೆಕ್ಟೇರ್ಗೆ ವ್ಯಾಪಿಸಿದೆ.</p>.<p>ರೈತರು ತಮ್ಮ ಹೊಲ–ಗದ್ದೆಯನ್ನು ಬೇರೆಯವರಿಗೆ ಎಕರೆಗೆ ₹1 ಲಕ್ಷದಂತೆ 18 ತಿಂಗಳವರೆಗೆ ಲಾವಣಿ ರೂಪದಲ್ಲಿ ನೀಡುತ್ತಿರುವುದರಿಂದ ಶುಂಠಿ ಬೆಳೆ ಹೆಚ್ಚಿದೆ. ಆದರೆ, ಇತರೆ ಬೆಳೆಗಳ ಪ್ರಮಾಣ ಕುಸಿತವಾಗುತ್ತಿದೆ.</p>.<p><strong>ಭತ್ತ, ಗೋವಿನಜೋಳ ಕುಸಿತ:</strong> ‘ಶುಂಠಿಯತ್ತ ಕೃಷಿಕರು ವಾಲುತ್ತಿರುವುದರಿಂದ ಭತ್ತ ಹಾಗೂ ಗೋವಿನ ಜೋಳ ಬೆಳೆ ಪ್ರಮಾಣ ಕುಸಿತ ಕಂಡಿದೆ. ಅಕ್ಕಿಯನ್ನು ಹೆಚ್ಚು ದರಕ್ಕೆ ಖರೀದಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನೀರಲಗಿ ಗ್ರಾಮದ ರೈತ ರಾಮಣ್ಣ ಹೇಳಿದರು.</p>.<p><strong>ಕೃಷಿ ಕಾರ್ಮಿಕರ ಕೊರತೆ:</strong> ಶುಂಠಿ ಕೃಷಿ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಹೆಚ್ಚಿಗೆ ಕೂಲಿ ಸಿಗುತ್ತಿದೆ. ಇದರಿಂದಾಗಿ ಇತರೆ ಬೆಳೆ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಾರೆ. </p>.<p><strong>ಹೊರ ರಾಜ್ಯ–ಜಿಲ್ಲೆಯವರಿಗೆ ಲಾಭ:</strong> ‘ಮಂಗಳೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಾಗದ ಶುಂಠಿ ಬೆಳೆಗಾರರು ಇಲ್ಲಿಗೆ ಬಂದು, ರೈತರಿಂದ ಜಮೀನು ಪಡೆದು, ಬೆಳೆ ಬೆಳೆಯುತ್ತಿದ್ದಾರೆ. ಅವರು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.</p>.<p><strong>‘ಸಾಲ ತೀರಿಸಿದ್ದೇನೆ’ </strong></p><p>‘ಪ್ರತಿ ವರ್ಷ ಅತಿವೃಷ್ಟಿ–ಅನಾವೃಷ್ಟಿಯಿಂದ ಬೆಳೆ ಹಾಳಾಗುತ್ತಿದೆ. ಸಾಲ ಮಾಡಿ ಕೃಷಿ ಮಾಡಿದರೂ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ನಾಲ್ಕು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದು ಸಾಲ ತೀರಿಸಿದ್ದೇನೆ’ ಎಂದು ರೈತ ಸೋಮಶೇಖರ ಹೇಳಿದರು. </p><p>‘ಕಳೆದ ವರ್ಷಕ್ಕಿಂತ ಈ ವರ್ಷ ಶುಂಠಿ ಬೆಳೆ ಪ್ರಮಾಣ ಹೆಚ್ಚಿದ್ದು ಈ ಬೆಳೆ ಪ್ರೋತ್ಸಾಹಕ್ಕೆ ಸರ್ಕಾರದಿಂದ ಯಾವುದೇ ಯೋಜನೆ ಇಲ್ಲ. ಶುಂಠಿ ಬೆಳೆಗಾರರ ಜೊತೆ ಪಾಲುದಾರರಾಗಿ ರೈತರು ಕೃಷಿ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ಕಿಶೋರ ನಾಯ್ಕ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ</strong>: ಸಮೀಪದ ಧುಂಡಶಿ ಹೋಬಳಿಯಲ್ಲಿ ಒಟ್ಟು ಕೃಷಿ ಭೂಮಿ 12,840 ಹೆಕ್ಟೇರ್ ಇದ್ದು, ಕಳೆದ ವರ್ಷ 300 ಹೆಕ್ಟೇರ್ ಪ್ರದೇಶದಲ್ಲಿದ್ದ ಶುಂಠಿ ಬೆಳೆಯು, ಈ ವರ್ಷ 800 ಹೆಕ್ಟೇರ್ಗೆ ವ್ಯಾಪಿಸಿದೆ.</p>.<p>ರೈತರು ತಮ್ಮ ಹೊಲ–ಗದ್ದೆಯನ್ನು ಬೇರೆಯವರಿಗೆ ಎಕರೆಗೆ ₹1 ಲಕ್ಷದಂತೆ 18 ತಿಂಗಳವರೆಗೆ ಲಾವಣಿ ರೂಪದಲ್ಲಿ ನೀಡುತ್ತಿರುವುದರಿಂದ ಶುಂಠಿ ಬೆಳೆ ಹೆಚ್ಚಿದೆ. ಆದರೆ, ಇತರೆ ಬೆಳೆಗಳ ಪ್ರಮಾಣ ಕುಸಿತವಾಗುತ್ತಿದೆ.</p>.<p><strong>ಭತ್ತ, ಗೋವಿನಜೋಳ ಕುಸಿತ:</strong> ‘ಶುಂಠಿಯತ್ತ ಕೃಷಿಕರು ವಾಲುತ್ತಿರುವುದರಿಂದ ಭತ್ತ ಹಾಗೂ ಗೋವಿನ ಜೋಳ ಬೆಳೆ ಪ್ರಮಾಣ ಕುಸಿತ ಕಂಡಿದೆ. ಅಕ್ಕಿಯನ್ನು ಹೆಚ್ಚು ದರಕ್ಕೆ ಖರೀದಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನೀರಲಗಿ ಗ್ರಾಮದ ರೈತ ರಾಮಣ್ಣ ಹೇಳಿದರು.</p>.<p><strong>ಕೃಷಿ ಕಾರ್ಮಿಕರ ಕೊರತೆ:</strong> ಶುಂಠಿ ಕೃಷಿ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಹೆಚ್ಚಿಗೆ ಕೂಲಿ ಸಿಗುತ್ತಿದೆ. ಇದರಿಂದಾಗಿ ಇತರೆ ಬೆಳೆ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಾರೆ. </p>.<p><strong>ಹೊರ ರಾಜ್ಯ–ಜಿಲ್ಲೆಯವರಿಗೆ ಲಾಭ:</strong> ‘ಮಂಗಳೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಾಗದ ಶುಂಠಿ ಬೆಳೆಗಾರರು ಇಲ್ಲಿಗೆ ಬಂದು, ರೈತರಿಂದ ಜಮೀನು ಪಡೆದು, ಬೆಳೆ ಬೆಳೆಯುತ್ತಿದ್ದಾರೆ. ಅವರು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.</p>.<p><strong>‘ಸಾಲ ತೀರಿಸಿದ್ದೇನೆ’ </strong></p><p>‘ಪ್ರತಿ ವರ್ಷ ಅತಿವೃಷ್ಟಿ–ಅನಾವೃಷ್ಟಿಯಿಂದ ಬೆಳೆ ಹಾಳಾಗುತ್ತಿದೆ. ಸಾಲ ಮಾಡಿ ಕೃಷಿ ಮಾಡಿದರೂ ನಿರೀಕ್ಷಿತ ಆದಾಯ ಸಿಗುತ್ತಿಲ್ಲ. ನಾಲ್ಕು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದು ಸಾಲ ತೀರಿಸಿದ್ದೇನೆ’ ಎಂದು ರೈತ ಸೋಮಶೇಖರ ಹೇಳಿದರು. </p><p>‘ಕಳೆದ ವರ್ಷಕ್ಕಿಂತ ಈ ವರ್ಷ ಶುಂಠಿ ಬೆಳೆ ಪ್ರಮಾಣ ಹೆಚ್ಚಿದ್ದು ಈ ಬೆಳೆ ಪ್ರೋತ್ಸಾಹಕ್ಕೆ ಸರ್ಕಾರದಿಂದ ಯಾವುದೇ ಯೋಜನೆ ಇಲ್ಲ. ಶುಂಠಿ ಬೆಳೆಗಾರರ ಜೊತೆ ಪಾಲುದಾರರಾಗಿ ರೈತರು ಕೃಷಿ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ಕಿಶೋರ ನಾಯ್ಕ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>