ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕ ಸಿಡಿದು ವ್ಯಕ್ತಿಗೆ ಗಾಯ

Last Updated 4 ಜುಲೈ 2021, 16:00 IST
ಅಕ್ಷರ ಗಾತ್ರ

ಹಾವೇರಿ: ನಗರಕ್ಕೆ ಸಮೀಪದ ಕಾಗಿನೆಲೆ ರಸ್ತೆಯ ಕನಕಾಪುರ– ಕೋಡಿಹಳ್ಳಿ ರಸ್ತೆ ಮಧ್ಯದಲ್ಲಿ ಅಡಕೆ ಗಾತ್ರದ ಸ್ಫೋಟಕ ವಸ್ತು ಸಿಡಿದ ಪರಿಣಾಮ, ವ್ಯಕ್ತಿಯೊಬ್ಬನಿಗೆ ತೀವ್ರವಾದ ಗಾಯಗಳಾಗಿರುವ ಘಟನೆ ಶನಿವಾರ ನಡೆದಿದೆ.

ಹಾವೇರಿಯ ಹೊಸನಗರದ ಅಬ್ದುಲ್‌ ಖಾದರ್‌ ಹಾದಿಮನಿ‌ ಗಾಯಗೊಂಡ ವ್ಯಕ್ತಿ. ಇವರು ನಗರದ ರೈಲು ನಿಲ್ದಾಣದ ಸಮೀಪದ ಬೂ–ವೀರಾಪುರಕ್ಕೆ ಹೋಗುವ ರಸ್ತೆಯ ಪಕ್ಕದ ಬಯಲು ಜಾಗದಲ್ಲಿ ಮನೆ ಕಟ್ಟಲು ಕಲ್ಲುಗಳನ್ನು ನೋಡಲು ಹೋಗಿದ್ದರು. ಕಲ್ಲುಗಳ ಮಧ್ಯೆ ಸಂಗ್ರಹಿಸಿಟ್ಟಿದ್ದ ಅಡಿಕೆ ಗಾತ್ರದ ವಸ್ತುಗಳನ್ನು ಬೇರೆಡೆ ತಂದು, ಏನೋ ಸಿಕ್ಕಿತು ಎಂದು ಒಂದನ್ನು ಒಡೆದಾಗ ಅದು ಸ್ಫೋಟಿಸಿ ಅವಘಢ ಸಂಭವಿಸಿದೆ.

30 ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಶನಿವಾರ ಘಟನಾ ಸ್ಥಳಗಳಿಗೆ ಶ್ವಾನದಳದೊಂದಿಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT