ಹಾವೇರಿಯ ಹೊಸನಗರದ ಅಬ್ದುಲ್ ಖಾದರ್ ಹಾದಿಮನಿ ಗಾಯಗೊಂಡ ವ್ಯಕ್ತಿ. ಇವರು ನಗರದ ರೈಲು ನಿಲ್ದಾಣದ ಸಮೀಪದ ಬೂ–ವೀರಾಪುರಕ್ಕೆ ಹೋಗುವ ರಸ್ತೆಯ ಪಕ್ಕದ ಬಯಲು ಜಾಗದಲ್ಲಿ ಮನೆ ಕಟ್ಟಲು ಕಲ್ಲುಗಳನ್ನು ನೋಡಲು ಹೋಗಿದ್ದರು. ಕಲ್ಲುಗಳ ಮಧ್ಯೆ ಸಂಗ್ರಹಿಸಿಟ್ಟಿದ್ದ ಅಡಿಕೆ ಗಾತ್ರದ ವಸ್ತುಗಳನ್ನು ಬೇರೆಡೆ ತಂದು, ಏನೋ ಸಿಕ್ಕಿತು ಎಂದು ಒಂದನ್ನು ಒಡೆದಾಗ ಅದು ಸ್ಫೋಟಿಸಿ ಅವಘಢ ಸಂಭವಿಸಿದೆ.