1976ರಿಂದ 1996ರವರೆಗೆ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಭಜನಾ, ತತ್ವಪದ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಹಾನಗಲ್ ತಾಲ್ಲೂಕಿನ ಮಾರನಬೀಡ ಭಜನಾ ಸ್ಪರ್ಧೆ ಸೇರಿದಂತೆ, ಉಳವಿ, ಮಲೆಬೆನ್ನೂರ, ಶಿರಾಳಕೊಪ್ಪ, ಶಿರಹಟ್ಟಿ, ಬಾಳೇಹೊನ್ನೂರ, ಕಪ್ಪದಗಿರಿ, ಸವಣೂರ ಮುಂತಾದ ಕಡೆ ಜಾತ್ರೆ, ಹಬ್ಬ ಹರಿದಿನಗಳಲ್ಲಿ ತತ್ವಪದ ಹಾಡುಗಾರಿಕೆಯ ಪ್ರದರ್ಶನ ನೀಡಿದ್ದಾರೆ.