<p>ಹಾವೇರಿ: ‘ಮನುಷ್ಯ ತಾನು ಬೆಳೆಯುವ ಜತೆಗೆ ಸುತ್ತಲಿನವರನ್ನೂ ಬೆಳೆಸಬೇಕು. ಸಮಾಜದೊಂದಿಗೆ ಸುಮಧುರ ಬಾಂಧವ್ಯ ಹೊಂದಿರಬೇಕು' ಎಂದು ಜೆಸಿಐ ಅಂತರರಾಷ್ಟ್ರೀಯ ಸಂಸ್ಥೆಯ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಸಿ ರಾಖಿ ಜೈನ್ ಅವರು ಅಭಿಪ್ರಾಯಪಟ್ಟರು.</p>.<p>ಹಾವೇರಿಯ ಸಜ್ಜನರ ಫಂಕ್ಷನ್ ಹಾಲ್ನಲ್ಲಿ ಏರ್ಪಡಿಸಿದ್ದ ‘ಅಧ್ಯಕ್ಷರ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ವ್ಯಕ್ತಿತ್ವ ವಿಕಸನವನ್ನು ಮುಖ್ಯ ಗುರಿಯನ್ನಾಗಿಸಿಕೊಂಡ ಜೇಸಿಐ ಸಂಸ್ಥೆ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಯುವ ಪ್ರತಿಭೆಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದು ನುಡಿದರು.</p>.<p>ಸಮ್ಮೆಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಾವೇರಿ ಘಟಕದ ಅಧ್ಯಕ್ಷ ಜೆ.ಸಿ ಮಂಜುನಾಥ ಚೂರಿ ಅವರು, ಈ ಸಮ್ಮೇಳನ ಸಂಘಟಿಸಲು ಹಾವೇರಿ ನಗರಕ್ಕೆ ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.</p>.<p>ವಲಯ ನಿರ್ದೇಶಕ ಅರವಿಂದ ಬುರಡ್ಡಿ, ಕಾರ್ಯದರ್ಶಿ ಕಪೀಲ ರಾಠೋಡ, ಕಾರ್ಯಕ್ರಮ ನಿರ್ದೇಶಕ ದತ್ತಾತ್ರೆಯ ಜೋಶಿ ಇದ್ದರು.</p>.<p>ಜೇಸಿ ವಾಣಿಯನ್ನು ಅಶೋಕ ಹಾಡೂರ ವಾಚಿಸಿದರು. ಜೇಸಿ ರಾಜು ಚೌಶೆಟ್ಟಿ ರಾಷ್ಟ್ರೀಯ ಅಧ್ಯಕ್ಷರನ್ನು ಪರಿಚಯಿಸಿದರು. ಜೆಸಿ ಮಲ್ಲಿಕಾರ್ಜುನ ಶಾಂತಗಿರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ‘ಮನುಷ್ಯ ತಾನು ಬೆಳೆಯುವ ಜತೆಗೆ ಸುತ್ತಲಿನವರನ್ನೂ ಬೆಳೆಸಬೇಕು. ಸಮಾಜದೊಂದಿಗೆ ಸುಮಧುರ ಬಾಂಧವ್ಯ ಹೊಂದಿರಬೇಕು' ಎಂದು ಜೆಸಿಐ ಅಂತರರಾಷ್ಟ್ರೀಯ ಸಂಸ್ಥೆಯ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಸಿ ರಾಖಿ ಜೈನ್ ಅವರು ಅಭಿಪ್ರಾಯಪಟ್ಟರು.</p>.<p>ಹಾವೇರಿಯ ಸಜ್ಜನರ ಫಂಕ್ಷನ್ ಹಾಲ್ನಲ್ಲಿ ಏರ್ಪಡಿಸಿದ್ದ ‘ಅಧ್ಯಕ್ಷರ ಸಮ್ಮೇಳನ’ವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ವ್ಯಕ್ತಿತ್ವ ವಿಕಸನವನ್ನು ಮುಖ್ಯ ಗುರಿಯನ್ನಾಗಿಸಿಕೊಂಡ ಜೇಸಿಐ ಸಂಸ್ಥೆ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಯುವ ಪ್ರತಿಭೆಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದು ನುಡಿದರು.</p>.<p>ಸಮ್ಮೆಳನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಾವೇರಿ ಘಟಕದ ಅಧ್ಯಕ್ಷ ಜೆ.ಸಿ ಮಂಜುನಾಥ ಚೂರಿ ಅವರು, ಈ ಸಮ್ಮೇಳನ ಸಂಘಟಿಸಲು ಹಾವೇರಿ ನಗರಕ್ಕೆ ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.</p>.<p>ವಲಯ ನಿರ್ದೇಶಕ ಅರವಿಂದ ಬುರಡ್ಡಿ, ಕಾರ್ಯದರ್ಶಿ ಕಪೀಲ ರಾಠೋಡ, ಕಾರ್ಯಕ್ರಮ ನಿರ್ದೇಶಕ ದತ್ತಾತ್ರೆಯ ಜೋಶಿ ಇದ್ದರು.</p>.<p>ಜೇಸಿ ವಾಣಿಯನ್ನು ಅಶೋಕ ಹಾಡೂರ ವಾಚಿಸಿದರು. ಜೇಸಿ ರಾಜು ಚೌಶೆಟ್ಟಿ ರಾಷ್ಟ್ರೀಯ ಅಧ್ಯಕ್ಷರನ್ನು ಪರಿಚಯಿಸಿದರು. ಜೆಸಿ ಮಲ್ಲಿಕಾರ್ಜುನ ಶಾಂತಗಿರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>