ಹಾವೇರಿ:ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರ ಅಧ್ಯಕ್ಷತೆಯಲ್ಲಿ ಶಾಸಕ ನೆಹರು ಚ.ಓಲೇಕಾರ ನೇತೃತ್ವದಲ್ಲಿ ಜೆಡಿಎಸ್ ತೊರೆದು ಈರಣ್ಣ ಪಟ್ಟಣಶೆಟ್ಟಿಯವರ ಮುಖಂಡತ್ವದಲ್ಲಿ ಹಾವೇರಿ ಶಹರ, ಹತ್ತಿಮತ್ತೂರ, ಮಂಟಗಣಿ, ವಡ್ನಿಕೊಪ್ಪ, ಕಳಸೂರ, ಕಲಕೋಟಿ, ಇಚ್ಚಂಗಿ ಈ ಗ್ರಾಮದ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ನಗರಾಭಿವೃದ್ಧಿ ಅಧ್ಯಕ್ಷ ಈರಣ್ಣ ಸಂಗೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕಳಸೂರ, ಶಹರ ಘಟಕದ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಮಡಿವಾಳರ, ಶಿವರಾಜ ಮತ್ತಿಹಳ್ಳಿ, ಲಲಿತಾ ಗುಂಡೇನಹಳ್ಳಿ, ಮಂಜುನಾಥ ಇಟಗಿ, ಶ್ರೀಕಾಂತ ಪೂಜಾರ ಪಕ್ಷದ ಕಾರ್ಯಕರ್ತರು ಇದ್ದರು.