<p>ಯತ್ತಿನಹಳ್ಳಿ ಎಂಕೆ(ಹಂಸಬಾವಿ): ನಸುಕಿನ ಸುಮಾರು 4 ಗಂಟೆಯ ಹೊತ್ತು. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ವರ್ಗದ ದೃಷ್ಟಿ ಕ್ರೀಡಾಂಗಣದತ್ತ ನೆಟ್ಟಿತ್ತು. ಎದುರಾಳಿ ತಂಡದ ಓಟಗಾರರನ್ನು ಹಿಡಿಯಲು ಜಿಗಿಯುತ್ತ, ಓಡುತ್ತ ನಿರಂತರ ಪ್ರಯತ್ನದಲ್ಲಿದ್ದ ಆಟಗಾರ ಕೊನೆಗೂ ಯಶಸ್ವಿಯಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದಾಗ ಶಿಳ್ಳೆ, ಚಪ್ಪಾಳೆಯ ಸುರಿಮಳೆ...</p>.<p>ಇಲ್ಲಿಗೆ ಸಮೀಪದ ಯತ್ತಿನಹಳ್ಳಿ ಎಂಕೆ ಗ್ರಾಮದ ಬ್ರಹ್ಮಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕೊಕ್ಕೊ ಟೂರ್ನಿಯ ರೋಚಕ ಪೈನಲ್ ಹಣಾಹಣಿಯಲ್ಲಿ ಶಿವಮೊಗ್ಗ ಹಾಗೂ ಬ್ಯಾಡಗಿ ತಂಡಗಳ ನಡುವಿನ ಸೆಣಸಾಟದ ದೃಶ್ಯ ಕಂಡುಬಂದಿದ್ದು ಹೀಗೆ.</p>.<p>ಗೌರಿ -ಗಣೇಶ ವಿಸರ್ಜನೆಯ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯೂ ಟೂರ್ನಿ ನಡೆಯಿತು. ಪಂದ್ಯಾವಳಿಯಲ್ಲಿ ಸಂತೆಕಡೂರ, ಶಿವಮೊಗ್ಗ, ಹುಬ್ಬಳ್ಳಿ, ಸಮ್ಮಸಗಿ, ಗದಗ ಬೆಟಗೇರಿ, ಬ್ಯಾಡಗಿ, ಹುಲ್ಲಿನಕೊಪ್ಪ, ಮಲ್ಲೇನಹಳ್ಳಿ ಸೇರಿದಂತೆ 22 ತಂಡಗಳು ಭಾಗವಹಿಸಿದ್ದವು.</p>.<p>ಬ್ಯಾಡಗಿ ತಂಡವನ್ನು ಮಣಿಸಿ ಶಿವಮೊಗ್ಗ ತಂಡ ಪ್ರಥಮ ಸ್ಥಾನವನ್ನು(₹15,001) ಮುಡಿಗೇರಿಸಿಕೊಂಡಿತು.</p>.<p>ತರೆದಹಳ್ಳಿ ತಂಡ ದ್ವಿತೀಯ (₹12,001), ಹುಬ್ಬಳ್ಳಿ ತಂಡ ತೃತೀಯ (₹8,001) ಹಾಗೂ ಆತಿಥೇಯ ಯತ್ತಿನಹಳ್ಳಿ ಎಂಕೆ ಬ್ರಹ್ಮಲಿಂಗೇಶ್ವರ ತಂಡ ಚತುರ್ಥ ಬಹುಮಾನ (5001) ಪಡೆದವು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಪಿ ಹಾಗೂ ನಗದು ವಿತರಿಸಲಾಯಿತು.</p>.<p>ಇದಕ್ಕೂ ಮೊದಲು ಟೂರ್ನಿ ಉದ್ಘಾಟಿಸಿದ ಶಿವಮೂರ್ತೆಪ್ಪ ಬಣಕಾರ ಮಾತನಾಡಿ, ಇಂದಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಲಿವೆ ಎಂದರು.</p>.<p>ಈ ವೇಳೆ ಭರಮಗೌಡ ಸಣ್ಣಕ್ಕಿ, ಮಲ್ಲೇಶಪ್ಪ ಸಾತೇನಹಳ್ಳಿ, ಚನ್ನಪ್ಪ ಹಾಲಿಕಟ್ಟಿ, ಮಲ್ಲಪ್ಪ ಮುಚುಡಿ, ಕೆಂಚಪ್ಪ ಹಾರೋಮುಚುಡಿ, ಮಿಯಾಸಾಬ್, ಓಮನಗೌಡ ಸಣ್ಣಕ್ಕಿ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯತ್ತಿನಹಳ್ಳಿ ಎಂಕೆ(ಹಂಸಬಾವಿ): ನಸುಕಿನ ಸುಮಾರು 4 ಗಂಟೆಯ ಹೊತ್ತು. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ವರ್ಗದ ದೃಷ್ಟಿ ಕ್ರೀಡಾಂಗಣದತ್ತ ನೆಟ್ಟಿತ್ತು. ಎದುರಾಳಿ ತಂಡದ ಓಟಗಾರರನ್ನು ಹಿಡಿಯಲು ಜಿಗಿಯುತ್ತ, ಓಡುತ್ತ ನಿರಂತರ ಪ್ರಯತ್ನದಲ್ಲಿದ್ದ ಆಟಗಾರ ಕೊನೆಗೂ ಯಶಸ್ವಿಯಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದಾಗ ಶಿಳ್ಳೆ, ಚಪ್ಪಾಳೆಯ ಸುರಿಮಳೆ...</p>.<p>ಇಲ್ಲಿಗೆ ಸಮೀಪದ ಯತ್ತಿನಹಳ್ಳಿ ಎಂಕೆ ಗ್ರಾಮದ ಬ್ರಹ್ಮಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಈಚೆಗೆ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕೊಕ್ಕೊ ಟೂರ್ನಿಯ ರೋಚಕ ಪೈನಲ್ ಹಣಾಹಣಿಯಲ್ಲಿ ಶಿವಮೊಗ್ಗ ಹಾಗೂ ಬ್ಯಾಡಗಿ ತಂಡಗಳ ನಡುವಿನ ಸೆಣಸಾಟದ ದೃಶ್ಯ ಕಂಡುಬಂದಿದ್ದು ಹೀಗೆ.</p>.<p>ಗೌರಿ -ಗಣೇಶ ವಿಸರ್ಜನೆಯ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯೂ ಟೂರ್ನಿ ನಡೆಯಿತು. ಪಂದ್ಯಾವಳಿಯಲ್ಲಿ ಸಂತೆಕಡೂರ, ಶಿವಮೊಗ್ಗ, ಹುಬ್ಬಳ್ಳಿ, ಸಮ್ಮಸಗಿ, ಗದಗ ಬೆಟಗೇರಿ, ಬ್ಯಾಡಗಿ, ಹುಲ್ಲಿನಕೊಪ್ಪ, ಮಲ್ಲೇನಹಳ್ಳಿ ಸೇರಿದಂತೆ 22 ತಂಡಗಳು ಭಾಗವಹಿಸಿದ್ದವು.</p>.<p>ಬ್ಯಾಡಗಿ ತಂಡವನ್ನು ಮಣಿಸಿ ಶಿವಮೊಗ್ಗ ತಂಡ ಪ್ರಥಮ ಸ್ಥಾನವನ್ನು(₹15,001) ಮುಡಿಗೇರಿಸಿಕೊಂಡಿತು.</p>.<p>ತರೆದಹಳ್ಳಿ ತಂಡ ದ್ವಿತೀಯ (₹12,001), ಹುಬ್ಬಳ್ಳಿ ತಂಡ ತೃತೀಯ (₹8,001) ಹಾಗೂ ಆತಿಥೇಯ ಯತ್ತಿನಹಳ್ಳಿ ಎಂಕೆ ಬ್ರಹ್ಮಲಿಂಗೇಶ್ವರ ತಂಡ ಚತುರ್ಥ ಬಹುಮಾನ (5001) ಪಡೆದವು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಪಿ ಹಾಗೂ ನಗದು ವಿತರಿಸಲಾಯಿತು.</p>.<p>ಇದಕ್ಕೂ ಮೊದಲು ಟೂರ್ನಿ ಉದ್ಘಾಟಿಸಿದ ಶಿವಮೂರ್ತೆಪ್ಪ ಬಣಕಾರ ಮಾತನಾಡಿ, ಇಂದಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಲಿವೆ ಎಂದರು.</p>.<p>ಈ ವೇಳೆ ಭರಮಗೌಡ ಸಣ್ಣಕ್ಕಿ, ಮಲ್ಲೇಶಪ್ಪ ಸಾತೇನಹಳ್ಳಿ, ಚನ್ನಪ್ಪ ಹಾಲಿಕಟ್ಟಿ, ಮಲ್ಲಪ್ಪ ಮುಚುಡಿ, ಕೆಂಚಪ್ಪ ಹಾರೋಮುಚುಡಿ, ಮಿಯಾಸಾಬ್, ಓಮನಗೌಡ ಸಣ್ಣಕ್ಕಿ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>