ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪ್ರಣವಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ

Last Updated 19 ಜನವರಿ 2021, 4:20 IST
ಅಕ್ಷರ ಗಾತ್ರ

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಅವರಿಗೆ ಸೋಮವಾರ ಕೊಲೆ ಬೆದರಿಕೆ‌ ಪತ್ರವೊಂದು ಬಂದಿದೆ‌.

ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು.

"ನೀ ಪಂಚಾಯತ್ ಸದಸ್ಯ ಆಗೀನಿ ಅಂತ ಮೆರೆಯಬೇಡ. ನಾವು ಯಾಕೆ ಸುಮ್ಮನಿದ್ದೇವಿ ಗೊತ್ತಾ... ನಿಮ್ಮನ್ನು ಯಾವಾಗ್ಲೋ ಊರು ಬಿಟ್ಟು ಕಳಿಸ್ತಿದ್ವಿ, ನೀವು ಆ ಒಬ್ಬ ವ್ಯಕ್ತಿಯಿಂದ ಬಚಾವ್ ಆಗ್ತಿದ್ದೀರಿ. ನಮಗೆ ಕೊಲೆ ಮಾಡುವುದು ದೊಡ್ಡ ಕೆಲಸ ಅಲ್ಲ. ಟಿಪ್ಪರ್, ಲಾರಿ ತಂದು ಡಿಕ್ಕಿ ಹೊಡೆಸಿದ್ರೆ ಸಾಕು, ನೀವು ಇಲ್ಲದಂತೆ ಮಾಡಬಹುದು' ಎಂದು ಪತ್ರದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.

ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸ್ವಾಮೀಜಿ ಅವರು ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT