ಸಾವಿರಾರು ಅಭಿಮಾನಿಗಳು ಮುಕ್ತಿಧಾಮಕ್ಕೆ ಸ್ವಯಂ ಪ್ರೇರಣೆಯಿಂದ ಬಂದು ನೂರಾರು ಹಾರ ಹಾಕುವುದು, ಗದ್ದುಗೆಗೆ ಹೂವಿನ ಅಲಂಕಾರ ಮಾಡುವುದು, ಉಪನ್ಯಾಸ, ದೇಶ ಭಕ್ತಿಗೀತೆ, ಕವಿಗೋಷ್ಠಿ ಒಮ್ಮೊಮ್ಮೆ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಏಳು ದಶಕಗಳ ಸುದೀರ್ಘ ಪರಂಪರೆಗೆ ಇದೇ ಮೊದಲ ಬಾರಿ ಅಡ್ಡಿಯಾಗಿದೆ ಎಂದು ಮೈಲಾರ ಮಹಾದೇವಪ್ಪನವರ ಟ್ರಸ್ಟ್ನ ಹಿರಿಯ ಸದಸ್ಯರಾದ ವಿ.ಎನ್. ತಿಪ್ಪನಗೌಡ ತಿಳಿಸಿದ್ದಾರೆ.