ಸನ್ಮಾನ ಸ್ವೀಕರಿಸಿ ಮಾತನಾಡಿದ, ಓಲೇಕಾರ, ‘ಕೆರೆಗೆ ನೀರು ತರಲು ಜಿಲ್ಲಾ ಪಂಚಾಯ್ತಿ ಸದಸ್ಯರ ವಿರೋಧದ ನಡುವೆ ಸೋಮನಕಟ್ಟಿ ಗ್ರಾಮದಲ್ಲಿ ಶಿರಸಿ– ಮೊಳಕಾಲ್ಮುರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಹೋರಾಡಲಾಗಿತ್ತು. ಜಿಲ್ಲಾ ಪಂಚಾಯ್ತಿಯಲ್ಲಿ ಇದ್ದ 242 ಪೈಪ್ಗಳನ್ನು ತಂದು ಕೆರೆಗೆ ನೀರು ಹರಿಸುವ ಕಾಮಗಾರಿಗೆ ಬಳಸಲಾಗಿತ್ತು. ಆದರೆ, ಈ ಪೈಪ್ಗಳನ್ನು ಕನವಳ್ಳಿ ಗ್ರಾಮದ ರೈತರು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಇಂಥ ಅಡೆತಡೆಗಳನ್ನು ಮೀರಿ ಹೋರಾಡಿದ ಫಲವಾಗಿ ಕೆರೆಗೆ ನೀರು ಹರಿಸುವ ಕಾರ್ಯ ಶುಕ್ರವಾರ ಆರಂಭಗೊಂಡಿದೆ. ಇದು ಸಂತಸದ ಸಂಗತಿ’ ಎಂದರು.