ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೊನೆಯ ಹಂತದವರೆಗೂ ನನಗಾಗಲಿ ಅಥವಾ ರುದ್ರಪ್ಪ ಲಮಾಣಿ ಅವರಿಗಾಗಲಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ಆಶಾಭಾವನೆ ಇತ್ತು. ಆದರೆ ಅದು ನಿರಾಸೆಯಾಗಿದ್ದು, ಜಿಲ್ಲೆಯ ಜನರಿಗೂ ನೋವಾಗಿದೆ ಎಂದರು.