<p><strong>ರಟ್ಟೀಹಳ್ಳಿ (ಹಾವೇರಿ ಜಿಲ್ಲೆ):</strong> ಪಶು ಚಿಕಿತ್ಸಾಲಯದ ಪ್ರತಿ ಬಿಲ್ಗೆ ₹1,200 ಲಂಚದ ಬೇಡಿಕೆ ಇಟ್ಟಿದ್ದ ರಟ್ಟೀಹಳ್ಳಿ ತಾಲ್ಲೂಕು ಉಪ ಖಜಾನೆಯ ಸಹಾಯಕ ಖಜಾನಾಧಿಕಾರಿ ಬಸವರಾಜ ಕಡೇಮನಿ ಮತ್ತು ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. </p>.<p>ಹಳ್ಳೂರು ಪಶು ಚಿಕಿತ್ಸಾಲಯದ 5 ಬಿಲ್ಗಳನ್ನು ಮಂಜೂರು ಮಾಡಲು ಪಶುವೈದ್ಯಾಧಿಕಾರಿ ಡಾ.ಅಮೃತರಾಜ ಜಿ.ಕೆ. ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಲಾಗಿತ್ತು. </p>.<p>‘ಒಂದು ಬಿಲ್ ಮಾಡಿಕೊಟ್ಟಿದ್ದಕ್ಕಾಗಿ ಒಂದು ಸಾವಿರ ಲಂಚವನ್ನು ತೆಗೆದುಕೊಳ್ಳುವಾಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ತಿಳಿಸಿದ್ದಾರೆ. </p>.<p><strong>ರಟ್ಟೀಹಳ್ಳಿ:</strong> ಪಟ್ಟಣದ ತಾಲ್ಲೂಕು ಉಪ-ಖಜಾನೆಯ ಸಹಾಯಕ ಖಜಾನಾಧಿಕಾರಿ ಬಸವರಾಜ ಕಡೇಮನಿ, ಹಾಗೂ ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಭಾವಿ ಅವರು ರಟ್ಟೀಹಳ್ಳಿ ತಾಲ್ಲೂಕು ಹಳ್ಳೂರು ಪಶು ಚಿಕಿತ್ಸಾಲಯದ ಬಿಲ್ಲುಗಳನ್ನು ಮಂಜೂರಿಸಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹಳ್ಳೂರು ಪಶು ವೈದ್ಯಾಧಿಕಾರಿ ಡಾ.ಅಮೃತರಾಜ ಜಿ.ಕೆ. ಲಿಖಿತ ದೂರಿನ ಮೇಲೆ ದಿನಾಂಕ: 17-07-2023ರ ಸೋಮವಾರ ಸಂಜೆ ಹಾವೇರಿ ಲೋಕಾಯುಕ್ತರು ದಾಳಿ ನಡೆಸಿ ರೂ. 1000/- ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು, ತನಿಖೆ ಮುಂದುವರೆದಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ (ಹಾವೇರಿ ಜಿಲ್ಲೆ):</strong> ಪಶು ಚಿಕಿತ್ಸಾಲಯದ ಪ್ರತಿ ಬಿಲ್ಗೆ ₹1,200 ಲಂಚದ ಬೇಡಿಕೆ ಇಟ್ಟಿದ್ದ ರಟ್ಟೀಹಳ್ಳಿ ತಾಲ್ಲೂಕು ಉಪ ಖಜಾನೆಯ ಸಹಾಯಕ ಖಜಾನಾಧಿಕಾರಿ ಬಸವರಾಜ ಕಡೇಮನಿ ಮತ್ತು ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. </p>.<p>ಹಳ್ಳೂರು ಪಶು ಚಿಕಿತ್ಸಾಲಯದ 5 ಬಿಲ್ಗಳನ್ನು ಮಂಜೂರು ಮಾಡಲು ಪಶುವೈದ್ಯಾಧಿಕಾರಿ ಡಾ.ಅಮೃತರಾಜ ಜಿ.ಕೆ. ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಲಾಗಿತ್ತು. </p>.<p>‘ಒಂದು ಬಿಲ್ ಮಾಡಿಕೊಟ್ಟಿದ್ದಕ್ಕಾಗಿ ಒಂದು ಸಾವಿರ ಲಂಚವನ್ನು ತೆಗೆದುಕೊಳ್ಳುವಾಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ತಿಳಿಸಿದ್ದಾರೆ. </p>.<p><strong>ರಟ್ಟೀಹಳ್ಳಿ:</strong> ಪಟ್ಟಣದ ತಾಲ್ಲೂಕು ಉಪ-ಖಜಾನೆಯ ಸಹಾಯಕ ಖಜಾನಾಧಿಕಾರಿ ಬಸವರಾಜ ಕಡೇಮನಿ, ಹಾಗೂ ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಭಾವಿ ಅವರು ರಟ್ಟೀಹಳ್ಳಿ ತಾಲ್ಲೂಕು ಹಳ್ಳೂರು ಪಶು ಚಿಕಿತ್ಸಾಲಯದ ಬಿಲ್ಲುಗಳನ್ನು ಮಂಜೂರಿಸಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹಳ್ಳೂರು ಪಶು ವೈದ್ಯಾಧಿಕಾರಿ ಡಾ.ಅಮೃತರಾಜ ಜಿ.ಕೆ. ಲಿಖಿತ ದೂರಿನ ಮೇಲೆ ದಿನಾಂಕ: 17-07-2023ರ ಸೋಮವಾರ ಸಂಜೆ ಹಾವೇರಿ ಲೋಕಾಯುಕ್ತರು ದಾಳಿ ನಡೆಸಿ ರೂ. 1000/- ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು, ತನಿಖೆ ಮುಂದುವರೆದಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>