<p><strong>ಗುತ್ತಲ</strong>: ಪ್ರಸ್ತುತ ಸಾಲಿನಲ್ಲಿ ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯಿತಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ 4,620 ವಸತಿ ಮನೆಗಳು ಮಂಜೂರಾಗಿವೆ. ಒಂದು ಮನೆಗೆ ₹ 1.20 ಲಕ್ಷ ಹಣ ಮಂಜೂರಾದ ಹಿನ್ನಲೆಯಲ್ಲಿ ಅಲ್ಪ ಹಣದಲ್ಲಿ ಮನೆ ನಿರ್ಮಾಣ ಮಾಡುವದು ಕಷ್ಟಕರ ಎಂದು ಫಲಾನುಭವಿಗಳು ಮನೆ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.</p>.<p>ತಾಲ್ನೂಲ ಹೊಸರಿತ್ತಿ, ಹಾವನೂರ, ಕನವಳ್ಳಿ, ದೇವಗಿರಿ, ಬಸಾಪೂರ, ಕಂಚಾರಗಟ್ಟಿ, ಹಾಂವಶಿ, ನೆಗಳೂರ ಗ್ರಾಮಗಳು ಸೇರಿದಂತೆ ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ವಸತಿ ಮನೆಗಳನ್ನು ಫಲಾನುಭವಿಗಳು ತಿರಸ್ಕರಿಸುತ್ತಿದ್ದಾರೆ.</p>.<p>‘₹ 1.20 ಲಕ್ಷ ಹಣದಲ್ಲಿ ಮರಳು ಸಹ ಬರಲ್ಲ. ಇಟ್ಟಿಗೆ, ಕಬ್ಬಿಣ, ಮರಳು, ಸಿಮೆಂಟ್ ಸೇರಿದಂತೆ ಮನೆ ನಿರ್ಮಾಣಕ್ಕೆ ಬೇಕಾಗುವ ವಸ್ತಗಳ ಬೆಲೆ ಗಗನಕ್ಕೇರಿವೆ. ಕೂಡಲೆ ಸರ್ಕಾರ ₹ 5 ಲಕ್ಷ ಮನೆಗಳನ್ನು ಮಂಜೂರು ಮಾಡಬೇಕು’ ಎಂದು ತಿಮ್ಮಾಪೂರ ಗ್ರಾಮದ ಫಲಾನುಭವಿ ಜ್ಯೋತಿ ಆಗ್ರಪಡಿಸಿದ್ದಾರೆ.</p>.<p>ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯತಿಗಳಿಗೆ 4,620 ಮನೆಗಳು 2024-25ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕೇವಲ 443 ಜನ ಫಲಾನುಭವಿಗಳು ಮನೆ ಕಟ್ಟಲಿಕ್ಕೆ ಅಡಿಪಾಯ ಹಾಕಿದ್ದಾರೆ. 4,177 ಜನ ಫಲಾನುಭವಿಗಳು ಕಡಿಮೆ ಹಣದ ಮನೆ ಬೇಡವೆಂದು ತಿರಸ್ಕರಿಸಿದ್ದಾರೆ. ಕೂಡಲೇ ಸರ್ಕಾರ ₹ 5 ಲಕ್ಷ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಅಗಡಿ, ನೆಗಳೂರ, ಕೊಣನತಂಬಗಿ, ಕೊಳೂರ ಗ್ರಾಮಗಲ್ಲಿ ತಲಾ ಒಂದು ಮನೆಗೆ ಅಡಿಪಾಯ ಹಾಕಿದರೆ ಹಾಲಗಿ ಗ್ರಾಮ ಪಂಚಾಯತಿಗೆ 152 ಮನೆ ಮಂಜೂರಾಗಿದ್ದು ಒಬ್ಬರು ಸಹ ಮನೆ ತೆಗೆದುಕೊಂಡಿಲ್ಲ ಎಲ್ಲ ಫಲಾನುಭವಿಗಳು ತಿರಸ್ಕರಿಸಿದ್ದಾರೆ.</p>.<p>ನನಗೆ ಮನೆ ಇಲ್ಲ ಜಾಗ ಇದೆ ಜಾಗದ ಕೂಗಳತೆ ದೂರದಲ್ಲಿ ಸ್ಮಶಾನ ಇದೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇನೆ ರಾತ್ರಿಯಾದರೆ ವಿಷಜಂತುಗಳ ಕಾಟ ಕೂಡಲೆ ಸರ್ಕಾರ ನನಗೆ ಮನೆ ಮಂಜೂರ ಮಾಡಬೇಕೆಂದು ಹಾವನೂರ ಗ್ರಾಮದ ನಿವಾಸಿ ಮೌನೇಶ ಬಡ್ಡೆಪ್ಪನವರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.</p>.<p>ನೆರೆಸಂತ್ರಸ್ಥರ ಯೋಜನೆಡಿಯಲ್ಲಿ ಬಿಡುಗಡೆಯಾದ ಮನೆಗಳಿಗೆ 1 ಇಲ್ಲವೆ 2 ಬಿಲ್ ಮಾತ್ರ ಬಿಡುಗಡೆಯಾಗಿವೆ ಇನ್ನುಳಿದ ಬಿಲ್ ಮಂಜೂರಾಗುತ್ತಿಲ್ಲ ಜಿಪಿಎಸ್ ಮಾಡಿದರು ಹಣ ಮಂಜೂರಾಗಿಲ್ಲ ಕೂಡಲೆ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದು ಫಲಾನುಭವಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.</p>.<p>ಮಂಜೂರಾದ ಮನೆಗಳನ್ನು ತಿರಸ್ಕರಿಸಿದ ಫಲಾನುಭವಿಗಳಿಗೆ ಪಿಡಿಓಗಳು ನೋಟಿಸ್ ನೀಡುತ್ತಿದ್ದಾರೆ.ಮನೆ ಬೇಕಾದವರು ಒಂದು ವಾರದ ಒಳಗೆ ಆಧಾರಕಾರ್ಡ, ಬ್ಯಾಂಕ ಪಾಸ್ಬುಕ್, ರೇಷನ್ಕಾರ್ಡ, ಪೋಟೋ, ಜಾಗದ ಪಹಣಿ ನೀಡುವಂತೆ ಸೂಚನೆ ನೀಡಿದ್ದಾರೆ ಮನೆ ಬೇಡ ಎಂದು ತಿರಸ್ಕರಿಸುವವರ ಸಂಖ್ಯೆನೆ ಜಾಸ್ತಿ ಇದ್ದಾರೆಂದು ಪಿಡಿಓಗಳು ಹೇಳುತ್ತಾರೆ.</p>.<div><blockquote>ಅರ್ಧಕ್ಕೆ ನಿಂತ ಮನೆಗಳಿಗೆ ಉಳಿದ ಕಂತನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಸರ್ಕಾರ ಕೊಡುವ ₹ 1.20 ಲಕ್ಷ ಸಾಕಾಗುವುದಿಲ್ಲ.</blockquote><span class="attribution">– ಸಿದ್ದಪ್ಪ ದ್ಯಾಮಣ್ಣನವರ, ಬಿಜೆಪಿ ಮುಖಂಡ</span></div>.<p><strong>ಸಿಎಂ ಜೊತೆ ಚರ್ಚೆ: ಭರವಸೆ</strong></p><p>‘₹ 1.20 ಲಕ್ಷದ ಹಣದಲ್ಲಿ ಮಂಜೂರಾದ ಮನೆಗಳನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಆ ಹಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ₹ 5 ಲಕ್ಷ ಮಂಜೂರು ಮಾಡಲು ಮತ್ತು ಅರ್ಧಕ್ಕೆ ನಿಂತ ಮನೆಗಳಿಗೆ ಉಳಿದ ಕಂತಿನ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರ ಜೊತೆ ಚೆರ್ಚೆ ಮಾಡಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದರು.</p><p>ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿದ್ದ ಮನೆಗಳಿಗೆ ₹ 5 ಲಕ್ಷ ಹಣ ಮಂಜೂರು ಮಾಡಿತ್ತು. ಜಿಲ್ಲೆಯಲ್ಲಿ ಅತಿಹೆಚ್ಚು ಮನೆ ಮಂಜೂರ ಮಾಡಿ ಬಡವರಿಗೆ ಸಹಾಯವಾಗಿತ್ತು. ಕೂಡಲೇ ಸರ್ಕಾರ ಬಿದ್ದ ಮನೆಗಳಿಗೆ ₹ 3 ಇಲ್ಲವೇ ₹ 5 ಲಕ್ಷ ಹಣ ಮಂಜೂರ ಮಾಡಬೇಕು’ ಎಂದು ಮುಖಂಡ ಸಿದ್ದರಾಜ ಕಲಕೊಟಿ ಆಗ್ರಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ</strong>: ಪ್ರಸ್ತುತ ಸಾಲಿನಲ್ಲಿ ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯಿತಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ 4,620 ವಸತಿ ಮನೆಗಳು ಮಂಜೂರಾಗಿವೆ. ಒಂದು ಮನೆಗೆ ₹ 1.20 ಲಕ್ಷ ಹಣ ಮಂಜೂರಾದ ಹಿನ್ನಲೆಯಲ್ಲಿ ಅಲ್ಪ ಹಣದಲ್ಲಿ ಮನೆ ನಿರ್ಮಾಣ ಮಾಡುವದು ಕಷ್ಟಕರ ಎಂದು ಫಲಾನುಭವಿಗಳು ಮನೆ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.</p>.<p>ತಾಲ್ನೂಲ ಹೊಸರಿತ್ತಿ, ಹಾವನೂರ, ಕನವಳ್ಳಿ, ದೇವಗಿರಿ, ಬಸಾಪೂರ, ಕಂಚಾರಗಟ್ಟಿ, ಹಾಂವಶಿ, ನೆಗಳೂರ ಗ್ರಾಮಗಳು ಸೇರಿದಂತೆ ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳಲ್ಲಿ ವಸತಿ ಮನೆಗಳನ್ನು ಫಲಾನುಭವಿಗಳು ತಿರಸ್ಕರಿಸುತ್ತಿದ್ದಾರೆ.</p>.<p>‘₹ 1.20 ಲಕ್ಷ ಹಣದಲ್ಲಿ ಮರಳು ಸಹ ಬರಲ್ಲ. ಇಟ್ಟಿಗೆ, ಕಬ್ಬಿಣ, ಮರಳು, ಸಿಮೆಂಟ್ ಸೇರಿದಂತೆ ಮನೆ ನಿರ್ಮಾಣಕ್ಕೆ ಬೇಕಾಗುವ ವಸ್ತಗಳ ಬೆಲೆ ಗಗನಕ್ಕೇರಿವೆ. ಕೂಡಲೆ ಸರ್ಕಾರ ₹ 5 ಲಕ್ಷ ಮನೆಗಳನ್ನು ಮಂಜೂರು ಮಾಡಬೇಕು’ ಎಂದು ತಿಮ್ಮಾಪೂರ ಗ್ರಾಮದ ಫಲಾನುಭವಿ ಜ್ಯೋತಿ ಆಗ್ರಪಡಿಸಿದ್ದಾರೆ.</p>.<p>ಹಾವೇರಿ ತಾಲೂಕಿನ 33 ಗ್ರಾಮ ಪಂಚಾಯತಿಗಳಿಗೆ 4,620 ಮನೆಗಳು 2024-25ರಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕೇವಲ 443 ಜನ ಫಲಾನುಭವಿಗಳು ಮನೆ ಕಟ್ಟಲಿಕ್ಕೆ ಅಡಿಪಾಯ ಹಾಕಿದ್ದಾರೆ. 4,177 ಜನ ಫಲಾನುಭವಿಗಳು ಕಡಿಮೆ ಹಣದ ಮನೆ ಬೇಡವೆಂದು ತಿರಸ್ಕರಿಸಿದ್ದಾರೆ. ಕೂಡಲೇ ಸರ್ಕಾರ ₹ 5 ಲಕ್ಷ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಅಗಡಿ, ನೆಗಳೂರ, ಕೊಣನತಂಬಗಿ, ಕೊಳೂರ ಗ್ರಾಮಗಲ್ಲಿ ತಲಾ ಒಂದು ಮನೆಗೆ ಅಡಿಪಾಯ ಹಾಕಿದರೆ ಹಾಲಗಿ ಗ್ರಾಮ ಪಂಚಾಯತಿಗೆ 152 ಮನೆ ಮಂಜೂರಾಗಿದ್ದು ಒಬ್ಬರು ಸಹ ಮನೆ ತೆಗೆದುಕೊಂಡಿಲ್ಲ ಎಲ್ಲ ಫಲಾನುಭವಿಗಳು ತಿರಸ್ಕರಿಸಿದ್ದಾರೆ.</p>.<p>ನನಗೆ ಮನೆ ಇಲ್ಲ ಜಾಗ ಇದೆ ಜಾಗದ ಕೂಗಳತೆ ದೂರದಲ್ಲಿ ಸ್ಮಶಾನ ಇದೆ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇನೆ ರಾತ್ರಿಯಾದರೆ ವಿಷಜಂತುಗಳ ಕಾಟ ಕೂಡಲೆ ಸರ್ಕಾರ ನನಗೆ ಮನೆ ಮಂಜೂರ ಮಾಡಬೇಕೆಂದು ಹಾವನೂರ ಗ್ರಾಮದ ನಿವಾಸಿ ಮೌನೇಶ ಬಡ್ಡೆಪ್ಪನವರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.</p>.<p>ನೆರೆಸಂತ್ರಸ್ಥರ ಯೋಜನೆಡಿಯಲ್ಲಿ ಬಿಡುಗಡೆಯಾದ ಮನೆಗಳಿಗೆ 1 ಇಲ್ಲವೆ 2 ಬಿಲ್ ಮಾತ್ರ ಬಿಡುಗಡೆಯಾಗಿವೆ ಇನ್ನುಳಿದ ಬಿಲ್ ಮಂಜೂರಾಗುತ್ತಿಲ್ಲ ಜಿಪಿಎಸ್ ಮಾಡಿದರು ಹಣ ಮಂಜೂರಾಗಿಲ್ಲ ಕೂಡಲೆ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದು ಫಲಾನುಭವಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.</p>.<p>ಮಂಜೂರಾದ ಮನೆಗಳನ್ನು ತಿರಸ್ಕರಿಸಿದ ಫಲಾನುಭವಿಗಳಿಗೆ ಪಿಡಿಓಗಳು ನೋಟಿಸ್ ನೀಡುತ್ತಿದ್ದಾರೆ.ಮನೆ ಬೇಕಾದವರು ಒಂದು ವಾರದ ಒಳಗೆ ಆಧಾರಕಾರ್ಡ, ಬ್ಯಾಂಕ ಪಾಸ್ಬುಕ್, ರೇಷನ್ಕಾರ್ಡ, ಪೋಟೋ, ಜಾಗದ ಪಹಣಿ ನೀಡುವಂತೆ ಸೂಚನೆ ನೀಡಿದ್ದಾರೆ ಮನೆ ಬೇಡ ಎಂದು ತಿರಸ್ಕರಿಸುವವರ ಸಂಖ್ಯೆನೆ ಜಾಸ್ತಿ ಇದ್ದಾರೆಂದು ಪಿಡಿಓಗಳು ಹೇಳುತ್ತಾರೆ.</p>.<div><blockquote>ಅರ್ಧಕ್ಕೆ ನಿಂತ ಮನೆಗಳಿಗೆ ಉಳಿದ ಕಂತನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಸರ್ಕಾರ ಕೊಡುವ ₹ 1.20 ಲಕ್ಷ ಸಾಕಾಗುವುದಿಲ್ಲ.</blockquote><span class="attribution">– ಸಿದ್ದಪ್ಪ ದ್ಯಾಮಣ್ಣನವರ, ಬಿಜೆಪಿ ಮುಖಂಡ</span></div>.<p><strong>ಸಿಎಂ ಜೊತೆ ಚರ್ಚೆ: ಭರವಸೆ</strong></p><p>‘₹ 1.20 ಲಕ್ಷದ ಹಣದಲ್ಲಿ ಮಂಜೂರಾದ ಮನೆಗಳನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಆ ಹಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ₹ 5 ಲಕ್ಷ ಮಂಜೂರು ಮಾಡಲು ಮತ್ತು ಅರ್ಧಕ್ಕೆ ನಿಂತ ಮನೆಗಳಿಗೆ ಉಳಿದ ಕಂತಿನ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರ ಜೊತೆ ಚೆರ್ಚೆ ಮಾಡಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದರು.</p><p>ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿದ್ದ ಮನೆಗಳಿಗೆ ₹ 5 ಲಕ್ಷ ಹಣ ಮಂಜೂರು ಮಾಡಿತ್ತು. ಜಿಲ್ಲೆಯಲ್ಲಿ ಅತಿಹೆಚ್ಚು ಮನೆ ಮಂಜೂರ ಮಾಡಿ ಬಡವರಿಗೆ ಸಹಾಯವಾಗಿತ್ತು. ಕೂಡಲೇ ಸರ್ಕಾರ ಬಿದ್ದ ಮನೆಗಳಿಗೆ ₹ 3 ಇಲ್ಲವೇ ₹ 5 ಲಕ್ಷ ಹಣ ಮಂಜೂರ ಮಾಡಬೇಕು’ ಎಂದು ಮುಖಂಡ ಸಿದ್ದರಾಜ ಕಲಕೊಟಿ ಆಗ್ರಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>