‘ಕನ್ನಡಿಗರ ಪರ ಹೋರಾಟ ಮಾಡಿದಾಗಲೆಲ್ಲ ನಮಗೆ ಲಾಠಿ ಏಟು, ಜೈಲು ವಾಸದ ಶಿಕ್ಷೆ ಸಿಕ್ಕಿದೆ. ಮೂರೂ ಪಕ್ಷದವರಿಗೆ (ಬಿಜೆಪಿ, ಕಾಂಗ್ರೆಸ್, ಜೆಡಿಎಸ್) ಮರಾಠಿಗರ ಮತಗಳು ಬೇಕಾಗಿವೆಯೇ ಹೊರತು, ಕನ್ನಡಿಗರ ಹಿತ ಬೇಕಿಲ್ಲ. ಅದೇ ರೀತಿ ಶಿವಸೇನೆಯವರು ಹಿಂದುತ್ವವನ್ನು ಬಿಟ್ಟು, ಭಾಷಾ ವಿಷಯದಲ್ಲಿ ಕನ್ನಡಿಗರ ಜತೆ ಚೆಲ್ಲಾಟವಾಡುವುದು ಸಲ್ಲದು ಎಂದು ಕಿಡಿಕಾರಿದರು.