<p><strong>ರಾಣೆಬೆನ್ನೂರು</strong>: ನಗರದ ಆಂಗ್ಲೋ ಉರ್ದು ಪ್ರೌಢಶಾಲೆ ಆವರಣದಲ್ಲಿ ಅಂಜುಮನ್ ಎ ಸಂಸ್ಥೆಯಲ್ಲಿ ಆರಂಭಿಸಿರುವ 50 ಹಾಸಿಗೆಯ ಕ್ವಾರಂಟೈನ್ ಕೇಂದ್ರವನ್ನು ಸಚಿವ ಆರ್.ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಉದ್ಘಾಟಿಸಿದರು.</p>.<p>ಶಂಕರ್ ಮಾತನಾಡಿ, ಅಂಜುನಮ್ ಎ ಇಸ್ಲಾಂ ಸಮಿತಿಯಿಂದ ಕ್ವಾರಂಟೈನ್ ಕೇಂದ್ರ ಆರಂಭಿಸಿದ್ದು ಸ್ವಾಗತಾರ್ಹ. ಇದರಿಂದ ನಗರ ಜನೆತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.</p>.<p>ತಾಲ್ಲೂಕಿನ ಮೇಡ್ಲೇರಿ ಮತ್ತು ತುಮ್ಮಿನಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎರಡು ಮತ್ತು ಈ ಅಂಜುಮನ್ ಸಂಸ್ಥೆಗೆ ನನ್ನ ಅನುದಾನದಲ್ಲಿ ಒಂದು ಆಂಬುಲೆನ್ಸ್ ಖರೀದಿಸಲು ಜಿಲ್ಲಾಡಳಿತಕ್ಕೆ ಆದೇಶ ಪತ್ರ ನೀಡಿದ್ದೇನೆ ಎಂದರು.</p>.<p>ಪ್ರಕಾಶ ಕೋಳಿವಾಡ ಮಾತನಾಡಿ, ನಮ್ಮ ಪಿಕೆಕೆ ಇನಿಶಿಯೇಟಿವ್ಸ್ ನಿಂದ ಸರ್ಕಾರಿ ಆಸ್ಪತ್ರೆಗೆ ಒಂದು ಆಮ್ಲಜನಕ ವಾಹನ ನೀಡಲಾಗಿದ್ದು, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 50 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದರು.</p>.<p>ಯುವ ಮುಖಂಡ ಇರ್ಫಾನ್ ದಿಡಗೂರ ಅವರು ಕ್ವಾರಂಟೈನ್ ಬಗ್ಗೆ ಮಾಹಿತಿ ನೀಡಿದರು. ಪಿಎಫ್ಐ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಫಜರುಲ್ಲಾ ಹಾಗೂ ಶೋಯೋಬ್ ಅವರನ್ನು ಸನ್ಮಾನಿಸಲಾಯಿತು.</p>.<p>ಡಾ. ಮನೋಜ ಸಾವುಕಾರ, ಡಾ. ವಿನಾಯಕ ಹಿರೇಗೌಡ್ರ, ಡಾ. ಅಭಿನಂದನ ಸಾಹುಕಾರ ಅವರು ಹಾಗೂ ಡಾ. ಜುಬೈರ್ ಐರಣಿ, ಡಾ.ಶಫತ್ತುಲ್ಲಾ ಕೆಂಗೊಂಡ, ಡಾ. ಅಪ್ರೋಜ್ ಐರಣಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ ಎಂದರು.</p>.<p>ಅಂಜುಮನ್ ಸಂಸ್ಥೆ ಆಡಳಿತಾಧಿಕಾರಿ ಅಮಾನುಲ್ಲಾ ಸಾಬ್ ಹಾವೇರಿ, ಮಸ್ತಾಕ್ ಕ್ಯಾಲಕೊಂಡ, ಜಾಮಾಲುದ್ದೀನ ಜಮ್ಮಣ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ನಗರದ ಆಂಗ್ಲೋ ಉರ್ದು ಪ್ರೌಢಶಾಲೆ ಆವರಣದಲ್ಲಿ ಅಂಜುಮನ್ ಎ ಸಂಸ್ಥೆಯಲ್ಲಿ ಆರಂಭಿಸಿರುವ 50 ಹಾಸಿಗೆಯ ಕ್ವಾರಂಟೈನ್ ಕೇಂದ್ರವನ್ನು ಸಚಿವ ಆರ್.ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಉದ್ಘಾಟಿಸಿದರು.</p>.<p>ಶಂಕರ್ ಮಾತನಾಡಿ, ಅಂಜುನಮ್ ಎ ಇಸ್ಲಾಂ ಸಮಿತಿಯಿಂದ ಕ್ವಾರಂಟೈನ್ ಕೇಂದ್ರ ಆರಂಭಿಸಿದ್ದು ಸ್ವಾಗತಾರ್ಹ. ಇದರಿಂದ ನಗರ ಜನೆತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.</p>.<p>ತಾಲ್ಲೂಕಿನ ಮೇಡ್ಲೇರಿ ಮತ್ತು ತುಮ್ಮಿನಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎರಡು ಮತ್ತು ಈ ಅಂಜುಮನ್ ಸಂಸ್ಥೆಗೆ ನನ್ನ ಅನುದಾನದಲ್ಲಿ ಒಂದು ಆಂಬುಲೆನ್ಸ್ ಖರೀದಿಸಲು ಜಿಲ್ಲಾಡಳಿತಕ್ಕೆ ಆದೇಶ ಪತ್ರ ನೀಡಿದ್ದೇನೆ ಎಂದರು.</p>.<p>ಪ್ರಕಾಶ ಕೋಳಿವಾಡ ಮಾತನಾಡಿ, ನಮ್ಮ ಪಿಕೆಕೆ ಇನಿಶಿಯೇಟಿವ್ಸ್ ನಿಂದ ಸರ್ಕಾರಿ ಆಸ್ಪತ್ರೆಗೆ ಒಂದು ಆಮ್ಲಜನಕ ವಾಹನ ನೀಡಲಾಗಿದ್ದು, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 50 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದರು.</p>.<p>ಯುವ ಮುಖಂಡ ಇರ್ಫಾನ್ ದಿಡಗೂರ ಅವರು ಕ್ವಾರಂಟೈನ್ ಬಗ್ಗೆ ಮಾಹಿತಿ ನೀಡಿದರು. ಪಿಎಫ್ಐ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಫಜರುಲ್ಲಾ ಹಾಗೂ ಶೋಯೋಬ್ ಅವರನ್ನು ಸನ್ಮಾನಿಸಲಾಯಿತು.</p>.<p>ಡಾ. ಮನೋಜ ಸಾವುಕಾರ, ಡಾ. ವಿನಾಯಕ ಹಿರೇಗೌಡ್ರ, ಡಾ. ಅಭಿನಂದನ ಸಾಹುಕಾರ ಅವರು ಹಾಗೂ ಡಾ. ಜುಬೈರ್ ಐರಣಿ, ಡಾ.ಶಫತ್ತುಲ್ಲಾ ಕೆಂಗೊಂಡ, ಡಾ. ಅಪ್ರೋಜ್ ಐರಣಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ ಎಂದರು.</p>.<p>ಅಂಜುಮನ್ ಸಂಸ್ಥೆ ಆಡಳಿತಾಧಿಕಾರಿ ಅಮಾನುಲ್ಲಾ ಸಾಬ್ ಹಾವೇರಿ, ಮಸ್ತಾಕ್ ಕ್ಯಾಲಕೊಂಡ, ಜಾಮಾಲುದ್ದೀನ ಜಮ್ಮಣ್ಣಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>