ಹಾನಗಲ್: ಬಸ್ ಮತ್ತು ಬೈಕ್ ಮಧ್ಯೆ ಸೋಮವಾರ ಸಂಬವಿಸಿದ ಅಪಘಾತದಲ್ಲಿ ತಾಲ್ಲೂಕಿನ ಮಕರವಳ್ಳಿ ಗ್ರಾಮದ ಗಜೇಂದ್ರ ಶಾಂತಪ್ಪ ಪೂಜಾರ (24) ಎಂಬುವರು ಮೃತಪಟ್ಟಿದ್ದಾರೆ.
ಹಾನಗಲ್-ಬಂಕಾಪೂರ ರಸ್ತೆಯ ತಾಲ್ಲೂಕಿನ ಗುಂಡೂರ ಕೆರೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಹಾನಗಲ್ಗೆ ಬಸ್ ಬರುತ್ತಿತ್ತು. ಬಂಕಾಪೂರ ಕಡೆಗೆ ಬೈಕ್ ತೆರಳುತ್ತಿತ್ತು. ಈ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.