ರಾಣೆಬೆನ್ನೂರು: ತಾಲ್ಲೂಕಿನ ಚಿಕ್ಕಕುರವತ್ತಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 70 ಮರಳನ್ನು ಕಂದಾಯ, ಗಣಿ ಇಲಾಖೆ ಮತ್ತು ಗ್ರಾಮೀಣ ಪೊಲೀಸ್ ಅಧಿಕಾರಿಗಳು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದರು. ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗಿತ್ತು. ಇದರ ಮೌಲ್ಯ ₹ 45 ಸಾವಿರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಹಶೀಲ್ದಾರ್ ಶಂಕರ್ ಜಿ.ಎಸ್, ವಾಗೀಶ ಮಳೇಮಠ ಹಾಗೂ ಗಣಿ ಇಲಾಖೆಯ ನಾಗರಾಜ, ಗ್ರಾಮ ಲೆಕ್ಕಾಧಿಕಾರಿ ಕುಮಾರಿ ಚೇತನಾ ಮತ್ತು ಸಿ.ಎನ್. ಪೂಜಾರ, ಎಎಸ್ಐಗಳಾದ ಅಂಬಿಗೇರ ಹಾಗೂ ಹೆಳವರ ಇದ್ದರು.