<p><strong>ಶಿಗ್ಗಾವಿ</strong>: ‘ಮನುಷ್ಯನಲ್ಲಿನ ಅಂದಕಾರ ದೂರ ಮಾಡುವ ಮೂಲಕ ನಿತ್ಯದ ಬದುಕನ್ನು ಗಟ್ಟಿಗೊಳಿಸಲು ಅಕ್ಷರ ಜ್ಞಾನದ ಪಾತ್ರ ಮುಖ್ಯವಾಗಿದೆ. ಹೀಗಾಗಿ ಶಿಕ್ಷಣವೇ ನಿಜವಾದ ಬೆಳಕಾಗಿ ನಿಂತಿದೆ’ ಎಂದು ಬಿಇಒ ಎಂ.ಬಿ. ಅಂಬಿಗೇರ ಹೇಳಿದರು.</p>.<p>ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿ ಮಠದಲ್ಲಿ ಭಾನುವಾರ ಎಂಇಎಸ್ ಶಾಲೆಯ 1990-91 ಸಾಲಿನ ವಿದ್ಯಾರ್ಥಿಗಳಿಂದ ನಡೆದ ಸ್ನೇಹ ಸಮ್ಮಿಲನ ಹಾಗೂ ರನ್ನಮಯ್ಯ ಅಸೋಸಿಯೇಷನ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>ರನ್ನಮಯ್ಯ ಅಸೋಸಿಯೇಷನ್ ಕಾರ್ಯದರ್ಶಿ ಹನುಮಂತಪ್ಪ ಯು.ವಿ, ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಫ್.ಸಿ. ಕಾಡಪ್ಪಗೌಡ್ರ, ನಿವೃತ್ತ ಮುಖ್ಯ ಶಿಕ್ಷಕ ಬಿ.ಎಲ್. ಗೊಟಗೋಡಿ, ಮಾತನಾಡಿದರು. ದೇಸಾಯಿ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಲತೇಶ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.</p>.<p>ಕೊಟ್ರೇಶ ಆದವಾನಿಮಠ, ಸುಮಿತ್ರಾ ದಿಡಗೂರ, ಸಿ.ಬಿ. ಸಿರಬಡಗಿ, ಮಧುಮತಿ ನಾಯ್ಕ, ಗೌಡಪ್ಪ ಬನ್ನೆ, ಶೇಖಣ್ಣ ಕಟ್ಟಿಮನಿ, ಗೋವಿಂದ ಕುಲಕರ್ಣಿ, ಮೋದಿನಸಾಬ ದೊಡ್ಡಮನಿ, ಮಂಜುಳಾ ಹಳವಳ್ಳಿ, ರತ್ನಾ ಹುಯಿಲಗೋಳ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ</strong>: ‘ಮನುಷ್ಯನಲ್ಲಿನ ಅಂದಕಾರ ದೂರ ಮಾಡುವ ಮೂಲಕ ನಿತ್ಯದ ಬದುಕನ್ನು ಗಟ್ಟಿಗೊಳಿಸಲು ಅಕ್ಷರ ಜ್ಞಾನದ ಪಾತ್ರ ಮುಖ್ಯವಾಗಿದೆ. ಹೀಗಾಗಿ ಶಿಕ್ಷಣವೇ ನಿಜವಾದ ಬೆಳಕಾಗಿ ನಿಂತಿದೆ’ ಎಂದು ಬಿಇಒ ಎಂ.ಬಿ. ಅಂಬಿಗೇರ ಹೇಳಿದರು.</p>.<p>ತಾಲ್ಲೂಕಿನ ಬಂಕಾಪುರ ಪಟ್ಟಣದ ದೇಸಾಯಿ ಮಠದಲ್ಲಿ ಭಾನುವಾರ ಎಂಇಎಸ್ ಶಾಲೆಯ 1990-91 ಸಾಲಿನ ವಿದ್ಯಾರ್ಥಿಗಳಿಂದ ನಡೆದ ಸ್ನೇಹ ಸಮ್ಮಿಲನ ಹಾಗೂ ರನ್ನಮಯ್ಯ ಅಸೋಸಿಯೇಷನ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>ರನ್ನಮಯ್ಯ ಅಸೋಸಿಯೇಷನ್ ಕಾರ್ಯದರ್ಶಿ ಹನುಮಂತಪ್ಪ ಯು.ವಿ, ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಫ್.ಸಿ. ಕಾಡಪ್ಪಗೌಡ್ರ, ನಿವೃತ್ತ ಮುಖ್ಯ ಶಿಕ್ಷಕ ಬಿ.ಎಲ್. ಗೊಟಗೋಡಿ, ಮಾತನಾಡಿದರು. ದೇಸಾಯಿ ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಲತೇಶ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.</p>.<p>ಕೊಟ್ರೇಶ ಆದವಾನಿಮಠ, ಸುಮಿತ್ರಾ ದಿಡಗೂರ, ಸಿ.ಬಿ. ಸಿರಬಡಗಿ, ಮಧುಮತಿ ನಾಯ್ಕ, ಗೌಡಪ್ಪ ಬನ್ನೆ, ಶೇಖಣ್ಣ ಕಟ್ಟಿಮನಿ, ಗೋವಿಂದ ಕುಲಕರ್ಣಿ, ಮೋದಿನಸಾಬ ದೊಡ್ಡಮನಿ, ಮಂಜುಳಾ ಹಳವಳ್ಳಿ, ರತ್ನಾ ಹುಯಿಲಗೋಳ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>