<p><strong>ರಾಣೆಬೆನ್ನೂರು: </strong>‘ಶಿವಾಜಿ ಪ್ರತಿಮೆಗೆ ಸ್ವಾಮೀಜಿಯೊಬ್ಬರು ಮಾಲಾರ್ಪಣೆ ಮಾಡಿದ್ದರಿಂದ ಅಪವಿತ್ರವಾಗಿದೆ’ ಎಂದು ಆರೋಪಿಸಿ ತಾಲ್ಲೂಕಿನ ಆರೆಮಲ್ಲಾಪುರ ಗ್ರಾಮಸ್ಥರು ಸೋಮವಾರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.</p>.<p>ಬೆಳಿಗ್ಗೆಯಿಂದಲೇ ಯುವಕರು ಶಿವಾಜಿ ಮೂರ್ತಿಯಿದ್ದ ಜಾಗವನ್ನು ಸ್ವಚ್ಛಗೊಳಿಸಿದರು. ಶಿವಾಜಿ ವೃತ್ತದ ಸುತ್ತ ತಳಿರು ತೋರಣ ಕಟ್ಟಿ ವಿವಿಧ ಹೂವು ಮತ್ತು ರಂಗೋಲಿಯಿಂದ ಶೃಂಗರಿಸಿದರು.</p>.<p>ದಾವಣಗೆರೆ ಶಿರಡಿ ಸಾಯಿಬಾಬಾ ಗುರುದೇವ ಸ್ವಾಮೀಜಿ ಅವರು ಕ್ಷೀರಾಭಿಷೇಕ, ಹೋಮ ಹವನ ಹಾಗೂ ವಿಶೇಷ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಕಲ ವಾದ್ಯಗಳೊಂದಿಗೆ ಶಿವಾಜಿ ಭಾವಚಿತ್ರದ ಮೆರವಣಿಗೆ ಮಾಡಿದರು. ನಂತರ ಅನ್ನಸಂತರ್ಪಣೆ ಮಾಡಿದರು.</p>.<p>‘ಭಾನುವಾರ ಪೊಲೀಸ್ ಭದ್ರತೆ ಯಲ್ಲಿ ಇದೇ ಗ್ರಾಮದ ಶರಣಬಸವೇಶ್ವರ ಮಠದ ಪ್ರಣಾವಾನಂದರಾಮ ಸ್ವಾಮೀಜಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಇದು ಆರೇಮಲ್ಲಾಪುರ ಗ್ರಾಮದ ಜನರಿಗೆ ಇಷ್ಟವಿರಲಿಲ್ಲ.</p>.<p>ಹೀಗಾಗಿ ಗ್ರಾಮಸ್ಥರು ದಾವಣಗೆರೆಯ ಸ್ವಾಮೀಜಿ ಕರೆಯಿಸಿ ಅವರ ನೇತೃತ್ವದಲ್ಲಿ ಶಿವಾಜಿ ಮೂರ್ತಿಗೆ ಕ್ಷೀರಾಭೀಷೇಕ, ಹೋಮ ಹವನ ಮಾಡಿಸುವ ಮೂಲಕ ಪಾವಿತ್ರ್ಯಗೊಳಿಸಿದರು’ ಎಂದು ಸ್ಥಳೀಯರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು: </strong>‘ಶಿವಾಜಿ ಪ್ರತಿಮೆಗೆ ಸ್ವಾಮೀಜಿಯೊಬ್ಬರು ಮಾಲಾರ್ಪಣೆ ಮಾಡಿದ್ದರಿಂದ ಅಪವಿತ್ರವಾಗಿದೆ’ ಎಂದು ಆರೋಪಿಸಿ ತಾಲ್ಲೂಕಿನ ಆರೆಮಲ್ಲಾಪುರ ಗ್ರಾಮಸ್ಥರು ಸೋಮವಾರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡಿದರು.</p>.<p>ಬೆಳಿಗ್ಗೆಯಿಂದಲೇ ಯುವಕರು ಶಿವಾಜಿ ಮೂರ್ತಿಯಿದ್ದ ಜಾಗವನ್ನು ಸ್ವಚ್ಛಗೊಳಿಸಿದರು. ಶಿವಾಜಿ ವೃತ್ತದ ಸುತ್ತ ತಳಿರು ತೋರಣ ಕಟ್ಟಿ ವಿವಿಧ ಹೂವು ಮತ್ತು ರಂಗೋಲಿಯಿಂದ ಶೃಂಗರಿಸಿದರು.</p>.<p>ದಾವಣಗೆರೆ ಶಿರಡಿ ಸಾಯಿಬಾಬಾ ಗುರುದೇವ ಸ್ವಾಮೀಜಿ ಅವರು ಕ್ಷೀರಾಭಿಷೇಕ, ಹೋಮ ಹವನ ಹಾಗೂ ವಿಶೇಷ ಪೂಜೆ, ಮಹಾಮಂಗಳಾರತಿ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಕಲ ವಾದ್ಯಗಳೊಂದಿಗೆ ಶಿವಾಜಿ ಭಾವಚಿತ್ರದ ಮೆರವಣಿಗೆ ಮಾಡಿದರು. ನಂತರ ಅನ್ನಸಂತರ್ಪಣೆ ಮಾಡಿದರು.</p>.<p>‘ಭಾನುವಾರ ಪೊಲೀಸ್ ಭದ್ರತೆ ಯಲ್ಲಿ ಇದೇ ಗ್ರಾಮದ ಶರಣಬಸವೇಶ್ವರ ಮಠದ ಪ್ರಣಾವಾನಂದರಾಮ ಸ್ವಾಮೀಜಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಇದು ಆರೇಮಲ್ಲಾಪುರ ಗ್ರಾಮದ ಜನರಿಗೆ ಇಷ್ಟವಿರಲಿಲ್ಲ.</p>.<p>ಹೀಗಾಗಿ ಗ್ರಾಮಸ್ಥರು ದಾವಣಗೆರೆಯ ಸ್ವಾಮೀಜಿ ಕರೆಯಿಸಿ ಅವರ ನೇತೃತ್ವದಲ್ಲಿ ಶಿವಾಜಿ ಮೂರ್ತಿಗೆ ಕ್ಷೀರಾಭೀಷೇಕ, ಹೋಮ ಹವನ ಮಾಡಿಸುವ ಮೂಲಕ ಪಾವಿತ್ರ್ಯಗೊಳಿಸಿದರು’ ಎಂದು ಸ್ಥಳೀಯರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>