ಈ ಉಪಚುನಾವಣೆಯನ್ನು ನಾವು ಬಯಸಿರಲಿಲ್ಲ. ಸಿ.ಎಂ. ಉದಾಸಿ 2023ರವರೆಗೆ ಶಾಸಕರಾಗಿರಲಿ ಎಂದು ಬಯಸಿದ್ದೆವು. ಆದರೆ ದುರ್ದೈವ ಅವರು ನಮ್ಮಗಲಿದ್ದಾರೆ.2018ರ ಚುನಾವಣೆಯಲ್ಲಿ ಮಾನೆ ಅವರು 6000 ಮತಗಳಿಂದ ಸೋತರು. ಆದರೂ ಕ್ಷೇತ್ರವನ್ನು ಬಿಡದೆ, ಕೋವಿಡ್ ಸಂದರ್ಭ ಮತದಾರರಿಗೆ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಸಿ.ಎಂ. ಉದಾಸಿ ಅವರು ಕಾಯಿಲೆಯಿಂದ ಹಾಸಿಗೆ ಹಿಡಿದ್ರೂ, ಸಂಸದ ಶಿವಕುಮಾರ ಉದಾಸಿ ಕ್ಷೇತ್ರದ ಕಡೆ ತಲೆ ಹಾಕಲಿಲ್ಲ ಎಂದು ಜರಿದರು.