ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭೂಮಿ ನಮ್ಮದು, ನಮ್ಮ ಊರಿನೊಳಗೆ ಭೂಗಳ್ಳರಿಗೆ ಪ್ರವೇಶವಿಲ್ಲ ಎಂದು ಗ್ರಾಮಗಳಲ್ಲಿ ಫಲಕ ಹಾಕುತ್ತಿದ್ದೇವೆ. ಉಳುವವನೇ ಭೂ ಒಡೆಯ ಎಂಬುದು ಬದಲಾಗಿ ಉಳ್ಳವನೇ ಭೂ ಒಡೆಯ ಎಂಬಂತಾಗಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಕೊರೊನಾ ತುರ್ತು ಸಂದರ್ಭದಲ್ಲಿ ಚರ್ಚೆಯನ್ನೇ ನಡೆಸದೆ, ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬಾಳಿಗೆ ಕೊಳ್ಳಿ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.