ಮುಖ್ಯಮಂತ್ರಿ ಭಾಷಣ ಮುಗಿದ ಕೂಡಲೇ ವೇದಿಕೆಯಲ್ಲಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಚೀಟಿ ಕೊಟ್ಟು ಇದೊಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು. ರಾಜ್ಯದ ಹಣಕಾಸು ಪರಿಸ್ಥಿತಿ ನೋಡಿಕೊಂಡು ಮಾಡೋಣ ಎಂದು ಸಿ.ಎಂ. ಉತ್ತರಿಸಿದರು. ಆದರೆ, ಬೊಮ್ಮಾಯಿ ದಯಮಾಡಿ ಘೋಷಣೆ ಮಾಡಿ ಎಂದರು. ಆಗ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದರು. ಸಭಿಕರಿಂದ ಮುಗಿಲುಮುಟ್ಟುವ ಕರತಾಡನ ಕೇಳಿಬಂತು.