ಮನೆಹಾನಿ ಪರಿಹಾರ ಕುರಿತಂತೆ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಅನುಸಾರ ಸಮೀಕ್ಷೆ ನಡೆಸಬೇಕು. ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎಂಜಿನಿಯರ್ಗಳು ಸ್ಥಳಕ್ಕೆ ಕಡ್ಡಾಯವಾಗಿ ಭೇಟಿ ನೀಡಿ ಫೋಟೋ ಸಹಿತ ವರದಿ ಸಲ್ಲಿಸಬೇಕು. ಈ ವರದಿ ಆಧರಿಸಿ ತಹಶೀಲ್ದಾರ್ ಪರಿಶೀಲನೆ ಮಾಡಿ ದೃಢೀಕರಿಸಿ ಕಳುಹಿಸಬೇಕು. ವಾಸ ಇಲ್ಲದ ಮನೆ ಬಿದ್ದರೆ ಪರಿಹಾರಕ್ಕೆ ಅವಕಾಶವಿರುವುದಿಲ್ಲ. ದನದ ಕೊಟ್ಟಿಗೆ ಬಿದ್ದರೆ ನಿಯಮಾವಳಿ ಅನುಸಾರ ಅದಕ್ಕೆ ಪ್ರತ್ಯೇಕ ಪರಿಹಾರಕ್ಕೆ ಅವಕಾಶವಿದೆ. ಯಾವುದೇ ಗೊಂದವಿಲ್ಲದಂತೆ ನಿಖರವಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.