ಹಾವೇರಿ: ‘ಕರ್ನಾಟಕ ರಾಜ್ಯ ಔಷಧ ಉಗ್ರಾಣ ನಿಗಮದಿಂದಜಿಲ್ಲೆಗೆ 10,500 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ಗಳು ಹಂಚಿಕೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಪೂರೈಕೆಯಾಗಲಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಂದು ವಾರದಿಂದ ಆರ್ಎಟಿ ಕಿಟ್ಗಳ ತೀವ್ರ ಕೊರತೆಯಿಂದ ‘ರ್ಯಾಪಿಡ್ ಟೆಸ್ಟ್’ ಬಂದ್ ಆಗಿ, ಸಾರ್ವಜನಿಕರು ಪರದಾಡುತ್ತಿದ್ದಾರೆ. ಜಿಲ್ಲೆಗೆ ಪೂರೈಕೆಯಾಗಿದ್ದ 32,400 ಕಿಟ್ಗಳು ಜಿಲ್ಲಾ ಔಷಧ ಉಗ್ರಾಣದಿಂದ ವಿವಿಧ ತಾಲ್ಲೂಕುಗಳ ಆಸ್ಪತ್ರೆಗಳಿಗೆ ಹಂಚಿಕೆಯಾಗಿ ಬಹುತೇಕ ಖಾಲಿಯಾಗಿದ್ದವು.
ಈ ಕುರಿತು ಪ್ರಜಾವಾಣಿಯಲ್ಲಿ ಸೆ.24ರಂದು ‘ಕಿಟ್ ಕೊರತೆ: ರ್ಯಾಪಿಡ್ ಟೆಸ್ಟ್ ಬಂದ್!’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.