<p><strong>ತಡಸ(ಶ್ಯಾಡಂಬಿ):</strong> ಮಕ್ಕಳು ವಿದ್ಯಾವಂತರಾಗಿ ದೊಡ್ಡ ಹುದ್ದೆಗಳಲ್ಲಿ ಇದ್ದರೂ ತಂದೆ, ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುವ ಪರಂಪರೆ ಇದೆ ಎಂದು ಬಂಕಾಪುರದ ಅರಳೆಲೆಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.</p>.<p>ಶ್ಯಾಡಂಬಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ, ತಾಯಿಗಳಲ್ಲಿಯೇ ದೇವರನ್ನು ಕಾಣಬೇಕಿದೆ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಶಶಿಧರ ಯಲಿಗಾರ, ತಂದೆ, ತಾಯಿಯರನ್ನು ಅನಾಥ ಆಶ್ರಮದಲ್ಲಿ ಬಿಡುವುದು ನಮ್ಮ ಸಂಸ್ಕೃತಿಯಲ್ಲ. ಅವರನ್ನು ಜೋಪಾನ ಮಾಡುವುದು ನಮ್ಮ ಜವಾಬ್ದಾರಿ ಎಂದರು.</p>.<p>ಮುಖ್ಯ ಅತಿಥಿ, ಸೋಮಣ್ಣ ಬೇವಿನಮರದ ಮಾತನಾಡಿ, ದ್ಯಾಮವ್ವ, ದುರ್ಗವ್ವ, ಕೊರವ್ವ, ಕೆಮ್ಮವ್ವ ಎಂಬ ಅನೇಕ ದೇವರುಗಳ ಇವೆ. ಅವು ಯಾವವೂ ನಿಜವಾದ ದೇವರುಗಳಲ್ಲ. ತಂದೆ, ತಾಯಿಯರೇ ನಿಜವಾದ ದೇವರು. ಅವರನ್ನು ಗೌರವಿಸಬೇಕಿದೆ ಎಂದರು.</p>.<p>ಯಾಶೀರಖಾನ್ ಪಠಾಣ, ತಿಪ್ಪಣ್ಣ ಸಾತಣ್ಣವರ, ಕೊಟ್ರೇಶ ಮಾಸ್ತರ ಬೆಳಗಲಿ, ಫಕ್ಕಿರೇಶ ಮಾಸ್ತರ ಕೊಂಡಾಯಿ ಮಾತನಾಡಿದರು.</p>.<p>ಗ್ರಾಮದ ಧರ್ಮ, ಕಾರ್ಯದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಬೆಳಗಲಿ ಗ್ರಾಮದ ಕಲಾವಿದರಿಂದ ಹಾಗೂ ಮಕ್ಕಳಿಂದ ಸಾಂಸ್ರ್ಕತಿಕ ಕಾರ್ಯಕ್ರಮ ನೆರವೇರಿತು.</p>.<p>ಮಾಂತೇಶ ಮಾಸ್ತರ ಬೆಳಗಲಿ, ಸುರೇಶ ಯಲಿಗಾರ, ನೀಲಪ್ಪ ಮಾಕಪ್ಪನವರ, ಚಂದ್ರು ಹುಬ್ಬಳ್ಳಿ, ಬಿ.ಎಸ್. ಹಿರೇಮಠ, ಬಸವರಾಜ ಹಿರೇಮಠ, ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ(ಶ್ಯಾಡಂಬಿ):</strong> ಮಕ್ಕಳು ವಿದ್ಯಾವಂತರಾಗಿ ದೊಡ್ಡ ಹುದ್ದೆಗಳಲ್ಲಿ ಇದ್ದರೂ ತಂದೆ, ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುವ ಪರಂಪರೆ ಇದೆ ಎಂದು ಬಂಕಾಪುರದ ಅರಳೆಲೆಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.</p>.<p>ಶ್ಯಾಡಂಬಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಂದೆ, ತಾಯಿಗಳಲ್ಲಿಯೇ ದೇವರನ್ನು ಕಾಣಬೇಕಿದೆ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಶಶಿಧರ ಯಲಿಗಾರ, ತಂದೆ, ತಾಯಿಯರನ್ನು ಅನಾಥ ಆಶ್ರಮದಲ್ಲಿ ಬಿಡುವುದು ನಮ್ಮ ಸಂಸ್ಕೃತಿಯಲ್ಲ. ಅವರನ್ನು ಜೋಪಾನ ಮಾಡುವುದು ನಮ್ಮ ಜವಾಬ್ದಾರಿ ಎಂದರು.</p>.<p>ಮುಖ್ಯ ಅತಿಥಿ, ಸೋಮಣ್ಣ ಬೇವಿನಮರದ ಮಾತನಾಡಿ, ದ್ಯಾಮವ್ವ, ದುರ್ಗವ್ವ, ಕೊರವ್ವ, ಕೆಮ್ಮವ್ವ ಎಂಬ ಅನೇಕ ದೇವರುಗಳ ಇವೆ. ಅವು ಯಾವವೂ ನಿಜವಾದ ದೇವರುಗಳಲ್ಲ. ತಂದೆ, ತಾಯಿಯರೇ ನಿಜವಾದ ದೇವರು. ಅವರನ್ನು ಗೌರವಿಸಬೇಕಿದೆ ಎಂದರು.</p>.<p>ಯಾಶೀರಖಾನ್ ಪಠಾಣ, ತಿಪ್ಪಣ್ಣ ಸಾತಣ್ಣವರ, ಕೊಟ್ರೇಶ ಮಾಸ್ತರ ಬೆಳಗಲಿ, ಫಕ್ಕಿರೇಶ ಮಾಸ್ತರ ಕೊಂಡಾಯಿ ಮಾತನಾಡಿದರು.</p>.<p>ಗ್ರಾಮದ ಧರ್ಮ, ಕಾರ್ಯದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಬೆಳಗಲಿ ಗ್ರಾಮದ ಕಲಾವಿದರಿಂದ ಹಾಗೂ ಮಕ್ಕಳಿಂದ ಸಾಂಸ್ರ್ಕತಿಕ ಕಾರ್ಯಕ್ರಮ ನೆರವೇರಿತು.</p>.<p>ಮಾಂತೇಶ ಮಾಸ್ತರ ಬೆಳಗಲಿ, ಸುರೇಶ ಯಲಿಗಾರ, ನೀಲಪ್ಪ ಮಾಕಪ್ಪನವರ, ಚಂದ್ರು ಹುಬ್ಬಳ್ಳಿ, ಬಿ.ಎಸ್. ಹಿರೇಮಠ, ಬಸವರಾಜ ಹಿರೇಮಠ, ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>