ಚಂದ್ರಶೇಖರ ಗಾಳಿ ಅವರು ಫೆ.3ರಂದು ಶಿಗ್ಗಾವಿ ತಾಲ್ಲೂಕಿನ ನೂತನ ತಹಶೀಲ್ದಾರ್ ಪ್ರಕಾಶ ಕುದರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ನಂತರ ವರ್ಗಾವಣೆ ಮಾಡಿರುವುದು ಕಾನೂನು ಬಾಹಿರ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯಿಂದ ತಡೆಯಾಜ್ಞೆ ತಂದು, ಫೆ.5ರಂದು ಮತ್ತೆ ಶಿಗ್ಗಾವಿ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೆಫೆ.7ರಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಡೆಯಾಜ್ಞೆ ನೀಡಿದ್ದರು.