ಹಂಸಭಾವಿ: ಇಲ್ಲಿಗೆ ಸಮೀಪದ ಚಿಕ್ಕೇರೂರು ಗ್ರಾಮದ ಬಳಿ19 ಸಾಗುವಾನಿ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೇರೂರಿನ ಜಾಕೀರ ತವನಂದಿ ಬಂಧಿತ ಆರೋಪಿ. ಈತ ಅನುಮಾನಾಸ್ಪದವಾಗಿ ಸಾಗುವಾನಿ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದಾಗ, ಮಂಗಳವಾರ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಟಿ.ವಿ.ಸುರೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿ ವೇಳೆ 1.50 ಲಕ್ಷ ಮೌಲ್ಯದ ಸಾಗುವಾನಿ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಂಸಭಾವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್ಐ ಜಯಪ್ಪ ನಾಯಕ ತಿಳಿಸಿದ್ದಾರೆ.
ದಾಳಿ ವೇಳೆ ಹಿರೇಕೆರೂರ ಸಿಪಿಐ ಮಂಜುನಾಥ ಪಂಡಿತ್, ಹವಾಲ್ದಾರ್ ಎನ್.ಎಚ್.ಡೋಲೆ, ಎಸ್.ಎಂ.ಅಂಗಡಿ, ಕಾನ್ಸ್ಟೆಬಲ್ಗಳಾದ ಸಿ.ಎಚ್.ದ್ಯಾವಣ್ಣನವರ, ಎಸ್.ಎಂ.ಭೋಗಾವಿ, ಬಸವರಾಜ ಡೋಣನವರ, ಬಿ.ಎಸ್.ಬಣಕಾರ, ಐ.ಎಸ್.ಸೊರಟೂರ, ರಮೇಶ ಬೊಮ್ಮಣ್ಣನವರ, ಕುಮಾರ ಲಮಾಣಿ ಇದ್ದರು.