<p><strong>ತಿಳವಳ್ಳಿ: </strong>ಗ್ರಾಮದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ರಥೋತ್ಸವವು ಭಕ್ತರ ಜಯಘೋಷದ ನಡುವೆ ಬುಧವಾರ ವಿಜೃಂಭಣೆಯಿಂದ ನೆರವೇರಿತು.</p>.<p>ದೇವಿಯ ಮಹಾರಥೋತ್ಸವದಲ್ಲಿ ತಿಳವಳ್ಳಿ, ಯತ್ತಿನಹಳ್ಳಿ, ಕೊಪ್ಪಗೊಂಡನಕೊಪ್ಪ, ಇನಾಂಲಕ್ಮಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ರಥೋತ್ಸವಕ್ಕೆ ತಿಳವಳ್ಳಿಯ ಮುರುಘರಾಜೇಂದ್ರ ಕಲ್ಮಠದ ಬಸವನಿರಂಜನ ಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದ ವೇಳೆ ಭಕ್ತಾದಿಗಳು ದೊಡ್ಡ ತೇರಿಗೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಮೆರೆದರು.</p>.<p>ಈ ರಥೋತ್ಸವವು ಡೊಳ್ಳು, ಭಜನೆ, ವಾದ್ಯ, ಸಮ್ಮಾಳ, ಝಾಂಜ್ ಫಥಾಕ್, ಚಂಡಿ ಬಳಗ, ಕುದುರೆ ಕುಣಿತ, ನಂದಿಕೋಲು ಕುಣಿತ ಸೇರಿದಂತೆ ಕಲಾ ತಂಡಗಳೊಂದಿಗೆ ಚೌಡೇಶ್ವರಿ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾದು ಹರ್ಡೀಕರ್ ವೃತ್ತದ ಮೂಲಕ ಮರಳಿ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿತು. ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ ನಡೆಯಿತು.</p>.<p>ಜಾತ್ರಾ ವಿಶೇಷತೆ: ಸಾಮಾನ್ಯವಾಗಿ ಎಲ್ಲಾ ಜಾತ್ರೆಗಳಲ್ಲಿ ತೇರನ್ನು ಹಗ್ಗದ ಸಹಾಯದಿಂದ ಎಳೆಯುತ್ತಾರೆ. ಆದರೆ ತಿಳವಳ್ಳಿಯ ಚೌಡೇಶ್ವರಿ ದೇವಿಯ 11 ಅಂಕಣದ ತೇರನ್ನು ಗ್ರಾಮಸ್ಥರು ಗಾಲಿಗಳನ್ನು ಕೈಗಳ ಮೂಲಕವೇ ಉರುಳಿಸಿ ಎಳೆಯುವುದು ವಿಶೇಷವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಳವಳ್ಳಿ: </strong>ಗ್ರಾಮದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ರಥೋತ್ಸವವು ಭಕ್ತರ ಜಯಘೋಷದ ನಡುವೆ ಬುಧವಾರ ವಿಜೃಂಭಣೆಯಿಂದ ನೆರವೇರಿತು.</p>.<p>ದೇವಿಯ ಮಹಾರಥೋತ್ಸವದಲ್ಲಿ ತಿಳವಳ್ಳಿ, ಯತ್ತಿನಹಳ್ಳಿ, ಕೊಪ್ಪಗೊಂಡನಕೊಪ್ಪ, ಇನಾಂಲಕ್ಮಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ರಥೋತ್ಸವಕ್ಕೆ ತಿಳವಳ್ಳಿಯ ಮುರುಘರಾಜೇಂದ್ರ ಕಲ್ಮಠದ ಬಸವನಿರಂಜನ ಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದ ವೇಳೆ ಭಕ್ತಾದಿಗಳು ದೊಡ್ಡ ತೇರಿಗೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಮೆರೆದರು.</p>.<p>ಈ ರಥೋತ್ಸವವು ಡೊಳ್ಳು, ಭಜನೆ, ವಾದ್ಯ, ಸಮ್ಮಾಳ, ಝಾಂಜ್ ಫಥಾಕ್, ಚಂಡಿ ಬಳಗ, ಕುದುರೆ ಕುಣಿತ, ನಂದಿಕೋಲು ಕುಣಿತ ಸೇರಿದಂತೆ ಕಲಾ ತಂಡಗಳೊಂದಿಗೆ ಚೌಡೇಶ್ವರಿ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾದು ಹರ್ಡೀಕರ್ ವೃತ್ತದ ಮೂಲಕ ಮರಳಿ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿತು. ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ ನಡೆಯಿತು.</p>.<p>ಜಾತ್ರಾ ವಿಶೇಷತೆ: ಸಾಮಾನ್ಯವಾಗಿ ಎಲ್ಲಾ ಜಾತ್ರೆಗಳಲ್ಲಿ ತೇರನ್ನು ಹಗ್ಗದ ಸಹಾಯದಿಂದ ಎಳೆಯುತ್ತಾರೆ. ಆದರೆ ತಿಳವಳ್ಳಿಯ ಚೌಡೇಶ್ವರಿ ದೇವಿಯ 11 ಅಂಕಣದ ತೇರನ್ನು ಗ್ರಾಮಸ್ಥರು ಗಾಲಿಗಳನ್ನು ಕೈಗಳ ಮೂಲಕವೇ ಉರುಳಿಸಿ ಎಳೆಯುವುದು ವಿಶೇಷವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>