86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಸಮ್ಮೇಳನ ಯಶಸ್ವಿಗೊಳಿಸಲು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಸಾವಿರಾರು ಪ್ರಶ್ನೆಗಳು, ಆರೋಪಗಳು, ಹೊಂದಾಣಿಕೆ ಕೊರತೆ... ಹೀಗೆ ಅನೇಕ ಅಡೆತಡೆಗಳನ್ನು ಛಲದಿಂದ ಎದುರಿಸಿದ್ದೇವೆ. ಮೂರು ದಿನಗಳ ಮೆಲುಕು ಹಾಕಿದರೆ ಎದೆ ತುಂಬಿ ಬರುತ್ತಿದೆ. ಸರ್ಕಾರ ನೀಡಿದ ₹20 ಕೋಟಿ ಅನುದಾನದ ಜೊತೆಗೆ, ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ತಪ್ಪುಗಳು ನಡೆದಿದ್ದರೆ ತಿದ್ದುಕೊಳ್ಳುತ್ತೇವೆ’ ಎಂದ ಜೋಶಿ, ‘ನಮ್ಮ ನಿಮ್ಮ ಭೇಟಿ ಮಂಡ್ಯದಲ್ಲಿ, ನಮಸ್ಕಾರ...’ ಎಂದು ಮಾತಿಗೆ ಪೂರ್ಣವಿರಾಮ ಹಾಕಿದರು.