ಹಿರೇಕೆರೂರ: `ಶಿಕ್ಷಕರು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ತೆರಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಮಾರ್ಗದರ್ಶನ ನೀಡಿ ದೇಶದ ಆಸ್ತಿಯನ್ನಾಗಿ ಮಾಡ ಬೇಕು' ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ ಶಿಕ್ಷಕರಿಗೆ ಸಲಹೆ ನೀಡಿದರು.
ಪಟ್ಟಣದ ಅಜಾದ್ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲಾ ಆವರಣದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಉರ್ದು ಮಾಧ್ಯಮ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ.ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎನ್.ಸುರೇಶ ಕುಮಾರ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಇಮ್ತೀಯಾಜ್ ಮಾಸೂರ ಅಧ್ಯಕ್ಷತೆ ವಹಿಸಿದ್ದರು.
ಪ.ಪಂ.ಸದಸ್ಯರಾದ ಗೀತಾ ದಂಡಗೀಹಳ್ಳಿ, ರಮೇಶ ತೋರಣಗಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಪಿ.ಬಿ.ನಿಂಗನ ಗೌಡ್ರ, ಶಿಕ್ಷಣ ಸಂಯೋಜಕರಾದ ಎಂ. ಎಸ್.ದಿವಿಗೀಹಳ್ಳಿ, ಎ.ಡಿ. ಕುರುಬರ, ಎಸ್ಡಿಎಂಸಿ ಸದಸ್ಯರಾದ ಶಮಿಲಾ ದಾರೂಗಾರ, ಹಯ್ಯಾತ್ ಮೋಯಿದ್ದೀನ್, ಅಪ್ರೀಜಾ ಕಡೂರ, ನಿಸಾರ್ಅಹ್ಮದ್, ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ಜಿ. ಯಲಿವಾಳ, ಸಹ ಶಿಕ್ಷಕ ಜಿ.ಎಚ್.ಅಗಸಿ ಬಾಗಿಲ ಉಪಸ್ಥಿತರಿದ್ದರು. ಸಿಆರ್ಪಿ ಎಂ.ಎಂ.ಮತ್ತೂರ ಸ್ವಾಗತಿಸಿ, ವಂದಿಸಿದರು.