<p><strong>ಶಿಗ್ಗಾವಿ:</strong> `ಅಂದಲಗಿ ಗ್ರಾಮ ಪಂಚಾಯಿತಿ 11 ಜನ ಸದಸ್ಯರು ಅಧ್ಯಕ್ಷೆ ಸುನಂದಾ ನೆಗಳೂರ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಕಾರಣ ಅಧ್ಯಕ್ಷರು ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದು, ಇಂತಹ ಆರೋಪದಲ್ಲಿ ಹುರುಳಿಲ್ಲ ನಾನು ನಿರಪರಾಧಿ~ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ಕೆ.ಅಕ್ಕಿ ಸ್ಪಷ್ಟಪಡಿಸಿದರು.<br /> <br /> ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಅಧಿಕಾರದಾಸೆ ಯಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾಲಕ್ಕೂ ನನ್ನ ಅವರ ನಡುವೆ ಯಾವುದೇ ವ್ಯವ ಹಾರವಿಲ್ಲ. ಅಂದಲಗಿ ಊರು ನನ್ನದಾ ದರೂ ನಾನು ನಿತ್ಯ ಶಿಗ್ಗಾವಿಯಲ್ಲಿ ವಾಸಿ ಸುತ್ತಿದ್ದೆನೆ. ಈ ಘಟನೆ ನಡೆದಾಗ ನಾನು ಬೆಂಗಳೂರಿನಲ್ಲಿರುವ ಕಾರಣ ಸ್ವಲ್ಪ ತಡವಾಗಿ ವಿಷಯ ತಿಳಿಯಿತು ಎಂದರು.<br /> <br /> ಗ್ರಾಮ ಪಂಚಾಯಿತಿಯಲ್ಲಿ ನನ್ನ ಅಳಿಯ ಹಾಗು ತಮ್ಮ ಇಬ್ಬರು ಹಾಲಿ ಸದಸ್ಯರಿದ್ದು, ಅವರು ಸಹ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಹಿ ಹಾಕಿದ್ದಾರೆ. ಅದರಿಂದ ಕೋಪಿತಗೊಂಡ ಅಧ್ಯಕ್ಷೆ ಸುನಂದಾ ಈ ರೀತಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.<br /> <br /> ಈ ಹಿಂದೆ ಗ್ರಾಪಂ ಅಧ್ಯಕ್ಷರನ್ನಾಗಿ ಮಾಡುವಾಗ ಕೆಲವು ಹಿರಿಯರೊಂದಿಗೆ ನಾನು ಇದ್ದು ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಆದರೆ ಈಗ ಅಧಿಕಾರ ಕಳೆದುಕೊಳ್ಳುವ ಹತಾಶ ಮನೋಭಾವನೆಯಿಂದ ಸುನಂದಾ ಆರೋಪ ಮಾಡುತ್ತಿದ್ದಾರೆ. ಅದನ್ನು ಸಾಬೀತು ಪಡಿಸಿದಲ್ಲಿ ಶಿಕ್ಷೆ ಅನುಭವಿ ಸಲು ಸಿದ್ದ ಎಂದು ಸ್ಪಷ್ಟಪಡಿಸಿದರು.<br /> <br /> ಸಂತೋಷಕುಮಾರ, ಶಂಕ್ರವ್ವ, ದೇವಕ್ಕಾ, ಲೋಕನಗೌಡ, ದೇವಕ್ಕಾ ಮತ್ತೂರ, ಶಶಿಕಲಾ ಕಮ್ಮಾರ, ಭೀಮಣ್ಣ, ಶಂಕರಗೌಡ, ಈರಯ್ಯ, ಭಾಸ್ಕರ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಗ್ಗಾವಿ:</strong> `ಅಂದಲಗಿ ಗ್ರಾಮ ಪಂಚಾಯಿತಿ 11 ಜನ ಸದಸ್ಯರು ಅಧ್ಯಕ್ಷೆ ಸುನಂದಾ ನೆಗಳೂರ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿರುವ ಕಾರಣ ಅಧ್ಯಕ್ಷರು ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದು, ಇಂತಹ ಆರೋಪದಲ್ಲಿ ಹುರುಳಿಲ್ಲ ನಾನು ನಿರಪರಾಧಿ~ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ಕೆ.ಅಕ್ಕಿ ಸ್ಪಷ್ಟಪಡಿಸಿದರು.<br /> <br /> ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಅಧಿಕಾರದಾಸೆ ಯಿಂದ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾಲಕ್ಕೂ ನನ್ನ ಅವರ ನಡುವೆ ಯಾವುದೇ ವ್ಯವ ಹಾರವಿಲ್ಲ. ಅಂದಲಗಿ ಊರು ನನ್ನದಾ ದರೂ ನಾನು ನಿತ್ಯ ಶಿಗ್ಗಾವಿಯಲ್ಲಿ ವಾಸಿ ಸುತ್ತಿದ್ದೆನೆ. ಈ ಘಟನೆ ನಡೆದಾಗ ನಾನು ಬೆಂಗಳೂರಿನಲ್ಲಿರುವ ಕಾರಣ ಸ್ವಲ್ಪ ತಡವಾಗಿ ವಿಷಯ ತಿಳಿಯಿತು ಎಂದರು.<br /> <br /> ಗ್ರಾಮ ಪಂಚಾಯಿತಿಯಲ್ಲಿ ನನ್ನ ಅಳಿಯ ಹಾಗು ತಮ್ಮ ಇಬ್ಬರು ಹಾಲಿ ಸದಸ್ಯರಿದ್ದು, ಅವರು ಸಹ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಹಿ ಹಾಕಿದ್ದಾರೆ. ಅದರಿಂದ ಕೋಪಿತಗೊಂಡ ಅಧ್ಯಕ್ಷೆ ಸುನಂದಾ ಈ ರೀತಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.<br /> <br /> ಈ ಹಿಂದೆ ಗ್ರಾಪಂ ಅಧ್ಯಕ್ಷರನ್ನಾಗಿ ಮಾಡುವಾಗ ಕೆಲವು ಹಿರಿಯರೊಂದಿಗೆ ನಾನು ಇದ್ದು ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಆದರೆ ಈಗ ಅಧಿಕಾರ ಕಳೆದುಕೊಳ್ಳುವ ಹತಾಶ ಮನೋಭಾವನೆಯಿಂದ ಸುನಂದಾ ಆರೋಪ ಮಾಡುತ್ತಿದ್ದಾರೆ. ಅದನ್ನು ಸಾಬೀತು ಪಡಿಸಿದಲ್ಲಿ ಶಿಕ್ಷೆ ಅನುಭವಿ ಸಲು ಸಿದ್ದ ಎಂದು ಸ್ಪಷ್ಟಪಡಿಸಿದರು.<br /> <br /> ಸಂತೋಷಕುಮಾರ, ಶಂಕ್ರವ್ವ, ದೇವಕ್ಕಾ, ಲೋಕನಗೌಡ, ದೇವಕ್ಕಾ ಮತ್ತೂರ, ಶಶಿಕಲಾ ಕಮ್ಮಾರ, ಭೀಮಣ್ಣ, ಶಂಕರಗೌಡ, ಈರಯ್ಯ, ಭಾಸ್ಕರ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>