<p>ಶಿಗ್ಗಾವಿ: ಭಾರತೀಯರ ಧರ್ಮಸಂಸ್ಕಾರಗಳು ಪರಂಪರಾಗತವಾಗಿ ಮಠಮಂದಿರಗಳ ತಳಹದಿಯ ಮೇಲೆ ಮುನ್ನಡೆಯುತ್ತಿವೆ. ಅದರಿಂದಾಗಿ ಸರ್ಕಾರ ಮೂಢನಂಬಿಕೆಗಳ ವಿರುದ್ಧ ಹೊಸ ಕಾಯ್ದೆ ರೂಪಿಸುವುದು ಸರಿಯಾದ ಕ್ರಮವಲ್ಲ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ ಪ್ರಸಾದ ಹೇಳಿದರು.<br /> <br /> ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹುಚ್ಚೇಶ್ವರಮಠದಲ್ಲಿ ಗುರುವಾರ ನಡೆದ 9ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು ಭಗವದ್ಗೀತೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಡಾ.ಆರ್.ಎಸ್.ಅರಳೆಲೆಹಿರೇಮಠ ಮಾತನಾಡಿ, ಬಾಹ್ಯವಿರೋಧಿಗಳಿಗಿಂತ ಆಂತರಿಕವಾಗಿ ನಮ್ಮಲ್ಲಿರುವ ವಿರುದ್ಧಶಕ್ತಿಯನ್ನು ತೆಗೆದು ಹಾಕುವ ಮೂಲಕ ಧರ್ಮದ ದಾರಿಯಲ್ಲಿ ನಡೆಸಲು ಶಿದ್ದಾಂತ ಶಿಖಾಮಣಿ ಗ್ರಂಥಗಳು ಅವಶ್ಯವಾಗಿದೆ ಎಂದರು.<br /> <br /> ಹುಬ್ಬಳ್ಳಿ ಪಂಚಗ್ರಹ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸದ್ಗುರುವಿನ ಉಪದೇಶಗಳಿಂದ ಮನುಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದರು.<br /> <br /> ಕಾಶಿಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಮುಕ್ತಿ ಮಾರ್ಗಕ್ಕಾಗಿ ಭಕ್ತಿ ದಾರಿ ಅವಶ್ಯವಾಗಿದೆ. ಅದಕ್ಕೆ ಸಿದ್ದಾಂತ ಶಿಖಾಮಣಿ ಗ್ರಂಥ ಅಧ್ಯಯನ ಅಗತ್ಯವಾಗಿದೆ ಎಂದರು.<br /> <br /> ಹೊತ್ನಹಳ್ಳಿ ಶಾಂತವೀರಮಠದ ಶಂಭುಲಿಂದ ಸ್ವಾಮೀಜಿ, ಹಾವೇರಿ ಎಲ್ಐಸಿ ಅಧಿಕಾರಿ ವಿ.ಜಿ.ಹರ್ಲಾಪುರ, ಮುಂಬೈ ವ್ಯಾವಾರಸ್ಥ ಆರ್.ಬಿ.ಹೆಬ್ಬಳ್ಳಿ, ಬಿ.ಟಿ.ವಿರೇಶ ಮತ್ತಿತರರು ಉಪಸ್ಥಿತರಿದ್ದರು.<br /> <br /> ಸಿದ್ದಾಂತ ಶಿಖಾಮಣಿ ಹೊಸ ಆವೃತಿ ಗ್ರಂಥ ಬಿಡುಗಡೆ ಹಾಗೂ ಕಾಶಿಪೀಠದ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಯಿತು.<br /> ಪರಶುರಾಮ ನರೇಗಲ್ಲ ಸಂಗಡಿಗರು ಸಂಗೀತ ಸೇವೆ ನೀಡಿರು. ಗಂಗೂಬಾಯಿ ದೇಸಾಯಿ ಸ್ವಾಗತಿಸಿದರು. ಸಿ.ಎನ್.ಶಿಗ್ಗಾವಿ ನಿರೂಪಿಸಿದರು. ಬಂಕಾನಾಥ ಮಹಿಳಾ ರುದ್ರಬಳಗದಿಂದ ರುದ್ರಪಠಣ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿಗ್ಗಾವಿ: ಭಾರತೀಯರ ಧರ್ಮಸಂಸ್ಕಾರಗಳು ಪರಂಪರಾಗತವಾಗಿ ಮಠಮಂದಿರಗಳ ತಳಹದಿಯ ಮೇಲೆ ಮುನ್ನಡೆಯುತ್ತಿವೆ. ಅದರಿಂದಾಗಿ ಸರ್ಕಾರ ಮೂಢನಂಬಿಕೆಗಳ ವಿರುದ್ಧ ಹೊಸ ಕಾಯ್ದೆ ರೂಪಿಸುವುದು ಸರಿಯಾದ ಕ್ರಮವಲ್ಲ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ ಪ್ರಸಾದ ಹೇಳಿದರು.<br /> <br /> ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹುಚ್ಚೇಶ್ವರಮಠದಲ್ಲಿ ಗುರುವಾರ ನಡೆದ 9ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು ಭಗವದ್ಗೀತೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಡಾ.ಆರ್.ಎಸ್.ಅರಳೆಲೆಹಿರೇಮಠ ಮಾತನಾಡಿ, ಬಾಹ್ಯವಿರೋಧಿಗಳಿಗಿಂತ ಆಂತರಿಕವಾಗಿ ನಮ್ಮಲ್ಲಿರುವ ವಿರುದ್ಧಶಕ್ತಿಯನ್ನು ತೆಗೆದು ಹಾಕುವ ಮೂಲಕ ಧರ್ಮದ ದಾರಿಯಲ್ಲಿ ನಡೆಸಲು ಶಿದ್ದಾಂತ ಶಿಖಾಮಣಿ ಗ್ರಂಥಗಳು ಅವಶ್ಯವಾಗಿದೆ ಎಂದರು.<br /> <br /> ಹುಬ್ಬಳ್ಳಿ ಪಂಚಗ್ರಹ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸದ್ಗುರುವಿನ ಉಪದೇಶಗಳಿಂದ ಮನುಕುಲದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದರು.<br /> <br /> ಕಾಶಿಪೀಠದ ಜಗದ್ಗರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಮುಕ್ತಿ ಮಾರ್ಗಕ್ಕಾಗಿ ಭಕ್ತಿ ದಾರಿ ಅವಶ್ಯವಾಗಿದೆ. ಅದಕ್ಕೆ ಸಿದ್ದಾಂತ ಶಿಖಾಮಣಿ ಗ್ರಂಥ ಅಧ್ಯಯನ ಅಗತ್ಯವಾಗಿದೆ ಎಂದರು.<br /> <br /> ಹೊತ್ನಹಳ್ಳಿ ಶಾಂತವೀರಮಠದ ಶಂಭುಲಿಂದ ಸ್ವಾಮೀಜಿ, ಹಾವೇರಿ ಎಲ್ಐಸಿ ಅಧಿಕಾರಿ ವಿ.ಜಿ.ಹರ್ಲಾಪುರ, ಮುಂಬೈ ವ್ಯಾವಾರಸ್ಥ ಆರ್.ಬಿ.ಹೆಬ್ಬಳ್ಳಿ, ಬಿ.ಟಿ.ವಿರೇಶ ಮತ್ತಿತರರು ಉಪಸ್ಥಿತರಿದ್ದರು.<br /> <br /> ಸಿದ್ದಾಂತ ಶಿಖಾಮಣಿ ಹೊಸ ಆವೃತಿ ಗ್ರಂಥ ಬಿಡುಗಡೆ ಹಾಗೂ ಕಾಶಿಪೀಠದ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಯಿತು.<br /> ಪರಶುರಾಮ ನರೇಗಲ್ಲ ಸಂಗಡಿಗರು ಸಂಗೀತ ಸೇವೆ ನೀಡಿರು. ಗಂಗೂಬಾಯಿ ದೇಸಾಯಿ ಸ್ವಾಗತಿಸಿದರು. ಸಿ.ಎನ್.ಶಿಗ್ಗಾವಿ ನಿರೂಪಿಸಿದರು. ಬಂಕಾನಾಥ ಮಹಿಳಾ ರುದ್ರಬಳಗದಿಂದ ರುದ್ರಪಠಣ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>