<p>ಮೈಸೂರು: ‘ಬೆಂಗಳೂರು– ಮೈಸೂರು ದಶಪಥ ಕಾಮಗಾರಿಯ ಗುಣಮಟ್ಟವನ್ನು ಕಾಯ್ದು<br />ಕೊಳ್ಳಲು ಶ್ರಮಿಸಬೇಕಾದ ಪ್ರತಿಪಕ್ಷದ ನಾಯಕರು, ಪ್ರಚಾರದಲ್ಲಿ ಮುಳುಗಿದ್ದರಿಂದ ಜನರು ಸಂಕಷ್ಟ ಎದುರಿಸುವಂತಾಯಿತು’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಅವರು ಹೇಳಿದ್ದಾರೆ.</p>.<p>‘ಬೆಂಗಳೂರು–ಮೈಸೂರು–ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆ ಗೊಂಡ ಮೇಲೆ ಯಾವುದೇ ಪಕ್ಷದ ಸರ್ಕಾರ ಬಂದರೂ ಪೂರ್ಣಗೊಳಿಸಬೇಕು. ಆದರೆ, ವ್ಯವಸ್ಥಿತ ಹಾಗೂ ವೈಜ್ಞಾನಿಕ ಕಾಮಗಾರಿ ನಡೆಸ<br />ಬೇಕಾದವರು ನಿರ್ಲಕ್ಷ್ಯ ವಹಿಸಿದರು’ ಎಂದು<br />ಪ್ರಕಟಣೆಯಲ್ಲಿ ದೂರಿದ್ದಾರೆ.</p>.<p>‘ಉತ್ತಮ ರಸ್ತೆ ನಿರ್ಮಾಣದತ್ತ ವ್ಯವಸ್ಥಿತ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. 1,882 ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಯುಪಿಎ ಸರ್ಕಾರ ಅನುಮೋದಿಸಿತ್ತು. ಅದರಿಂದಲೇ ದಶಪಥ ಕಾಮಗಾರಿ ಅನುಷ್ಠಾನಗೊಂಡಿದೆ’ ಎಂದು ತಿಳಿಸಿದ್ದಾರೆ.</p>.<p>‘ಕಾಂಗ್ರೆಸ್ ಅವಧಿಯಲ್ಲಿ ಪೂರ್ಣಗೊಂಡ ರಸ್ತೆಗಳು ಮುಂದಿನ 15 – 20 ವರ್ಷಗಳವರೆಗೆ ಸುಸ್ಥಿತಿಯಲ್ಲಿರುತ್ತವೆ. ಅವುಗಳ ಗುಣಮಟ್ಟವನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಕೆಲಸ ಯಾರದ್ದೋ, ಮಾತು– ಪ್ರಚಾರ ಮತ್ಯಾರದ್ದೋ ಎನ್ನುವ<br />ಪರಿಸ್ಥಿತಿ ನಿಲ್ಲಬೇಕು. ಕೆಲಸವನ್ನು ಗೌರವಿಸುವ ಆರೋಗ್ಯಕರ ಮನಸ್ಥಿತಿ ಮತ್ತು ರಾಜಕೀಯ ಮುತ್ಸದ್ದಿತನ ಬೆಳೆಯಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಬೆಂಗಳೂರು– ಮೈಸೂರು ದಶಪಥ ಕಾಮಗಾರಿಯ ಗುಣಮಟ್ಟವನ್ನು ಕಾಯ್ದು<br />ಕೊಳ್ಳಲು ಶ್ರಮಿಸಬೇಕಾದ ಪ್ರತಿಪಕ್ಷದ ನಾಯಕರು, ಪ್ರಚಾರದಲ್ಲಿ ಮುಳುಗಿದ್ದರಿಂದ ಜನರು ಸಂಕಷ್ಟ ಎದುರಿಸುವಂತಾಯಿತು’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಅವರು ಹೇಳಿದ್ದಾರೆ.</p>.<p>‘ಬೆಂಗಳೂರು–ಮೈಸೂರು–ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆ ಗೊಂಡ ಮೇಲೆ ಯಾವುದೇ ಪಕ್ಷದ ಸರ್ಕಾರ ಬಂದರೂ ಪೂರ್ಣಗೊಳಿಸಬೇಕು. ಆದರೆ, ವ್ಯವಸ್ಥಿತ ಹಾಗೂ ವೈಜ್ಞಾನಿಕ ಕಾಮಗಾರಿ ನಡೆಸ<br />ಬೇಕಾದವರು ನಿರ್ಲಕ್ಷ್ಯ ವಹಿಸಿದರು’ ಎಂದು<br />ಪ್ರಕಟಣೆಯಲ್ಲಿ ದೂರಿದ್ದಾರೆ.</p>.<p>‘ಉತ್ತಮ ರಸ್ತೆ ನಿರ್ಮಾಣದತ್ತ ವ್ಯವಸ್ಥಿತ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. 1,882 ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಯುಪಿಎ ಸರ್ಕಾರ ಅನುಮೋದಿಸಿತ್ತು. ಅದರಿಂದಲೇ ದಶಪಥ ಕಾಮಗಾರಿ ಅನುಷ್ಠಾನಗೊಂಡಿದೆ’ ಎಂದು ತಿಳಿಸಿದ್ದಾರೆ.</p>.<p>‘ಕಾಂಗ್ರೆಸ್ ಅವಧಿಯಲ್ಲಿ ಪೂರ್ಣಗೊಂಡ ರಸ್ತೆಗಳು ಮುಂದಿನ 15 – 20 ವರ್ಷಗಳವರೆಗೆ ಸುಸ್ಥಿತಿಯಲ್ಲಿರುತ್ತವೆ. ಅವುಗಳ ಗುಣಮಟ್ಟವನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಕೆಲಸ ಯಾರದ್ದೋ, ಮಾತು– ಪ್ರಚಾರ ಮತ್ಯಾರದ್ದೋ ಎನ್ನುವ<br />ಪರಿಸ್ಥಿತಿ ನಿಲ್ಲಬೇಕು. ಕೆಲಸವನ್ನು ಗೌರವಿಸುವ ಆರೋಗ್ಯಕರ ಮನಸ್ಥಿತಿ ಮತ್ತು ರಾಜಕೀಯ ಮುತ್ಸದ್ದಿತನ ಬೆಳೆಯಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>