ಮಂಗಳೂರು: ಲಾಕ್ಡೌನ್ ಸಡಿಲಿಕೆಯ ನಂತರ ಸರ್ಕಾರ ಹೋಟೆಲ್ಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಆದರೆ, ಬಹುತೇಕ ಹೋಟೆಲ್ಗಳು ಗ್ರಾಹಕರ ಕೊರತೆಯಿಂದ ಇನ್ನೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಈ ಮಧ್ಯೆ ನಗರದ ಹೋಟೆಲ್ನಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ನೂತನ ಕ್ರಮ ಕೈಗೊಂಡಿದ್ದು, ಊಟದ ಟೇಬಲ್ನ ಮಧ್ಯದಲ್ಲಿ ಫೈಬರ್ ಗ್ಲಾಸ್ ಅಳವಡಿಸಿದೆ.