‘ಪತ್ರಕರ್ತ ರವಿ ಬೆಳಗೆರೆ ಒಮ್ಮೆ ನನ್ನನ್ನು ಭೇಟಿ ಮಾಡಿ, ಅಣ್ಣಾ ₹50 ಲಕ್ಷ ಕೊಡ್ತಿನಿ. ನಿಮ್ಮ ಅನುಭವಗಳನ್ನು ಹೇಳಿ. ಒಂದು ಸೂಪರ್ ಹಿಟ್ ಸಿನಿಮಾ ಮಾಡುತ್ತೇನೆ ಎಂದಿದ್ದ. ಬೇರೆಯವರು ಸಹ ಪ್ರಯತ್ನಿಸಿದ್ದರು. ಆದರೆ, ಬೇಡ ಎಂದು ನಾನೇ ಸುಮ್ಮನಾಗಿದ್ದೆ. ಗ್ರಾಮೀಣ ಭಾಗದವರಿಗೆ ಸಾಧನೆ ಮಾಡಲು ಆತ್ಮವಿಶ್ವಾಸ ತುಂಬಬೇಕು ಎಂದು ಈ ಆತ್ಮಚರಿತ್ರೆ ಬರೆದೆ. ಇದರ ಇಂಗ್ಲಿಷ್, ತೆಲುಗಿನ ಅನುವಾದದ ಪುಸ್ತಕ ಹಾಗೂ ಆಡಿಯೊ ಕೂಡ ಶೀಘ್ರ ಹೊರಬರಲಿದೆ’ ಎಂದರು.