<p><strong>ಆಳಂದ:</strong> ಪಟ್ಟಣದ ಹೊರವಲಯದಲ್ಲಿನ ಆಳಂದ ರೈತ ಸಂಪರ್ಕ ಕೇಂದ್ರದಲ್ಲಿರುವ ಅಲ್ಮೇರಾ ಒಡೆದು ಅಲ್ಲಿದ್ದ ₹ 11.50 ಲಕ್ಷ ಹಣವನ್ನು ಸೋಮವಾರ ಕಳವು ಮಾಡಲಾಗಿದೆ.</p>.<p>ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜಗಳ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಕಾರ್ಯ ನಡೆದಿದೆ. ಜೂನ್ 7, 9ರಂದು ಬಿತ್ತನೆ ಬೀಜ ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ವಿಳಂಬವಾಗಿದೆ. ರೈತರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಂಜೆ 6 ಗಂಟೆವರೆಗೆ ಬೀಜ ವಿತರಣೆ ನಂತರ ಮರುದಿನ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಎರಡು ದಿನದ ಒಟ್ಟು ₹ 11.50 ಲಕ್ಷ ಹಣವನ್ನು ಕಚೇರಿಯ ಅಲ್ಮೇರಾದಲ್ಲಿ ಸಂಗ್ರಹಿಸಿಡಲಾಗಿತ್ತು. ಸೋಮವಾರ ರಾತ್ರಿ ರೈತ ಸಂಪರ್ಕ ಕೇಂದ್ರದ ಒಳಗೆ ನುಗ್ಗಿ, ಕಚೇರಿ ಕೋಣೆ ಬಾಗಿಲು ಮುರಿದು ಅಲ್ಮೇರಾ ಒಡೆದು ಹಣ ದೋಚಲಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಮಾಹಿತಿ ನೀಡಿದರು.</p>.<p>ಕಚೇರಿ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪ್ರಸ್ತುತ ಅದು ಸಕ್ರಿಯವಾಗಿಲ್ಲ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ:</strong> ಪಟ್ಟಣದ ಹೊರವಲಯದಲ್ಲಿನ ಆಳಂದ ರೈತ ಸಂಪರ್ಕ ಕೇಂದ್ರದಲ್ಲಿರುವ ಅಲ್ಮೇರಾ ಒಡೆದು ಅಲ್ಲಿದ್ದ ₹ 11.50 ಲಕ್ಷ ಹಣವನ್ನು ಸೋಮವಾರ ಕಳವು ಮಾಡಲಾಗಿದೆ.</p>.<p>ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜಗಳ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಕಾರ್ಯ ನಡೆದಿದೆ. ಜೂನ್ 7, 9ರಂದು ಬಿತ್ತನೆ ಬೀಜ ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ವಿಳಂಬವಾಗಿದೆ. ರೈತರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಂಜೆ 6 ಗಂಟೆವರೆಗೆ ಬೀಜ ವಿತರಣೆ ನಂತರ ಮರುದಿನ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಎರಡು ದಿನದ ಒಟ್ಟು ₹ 11.50 ಲಕ್ಷ ಹಣವನ್ನು ಕಚೇರಿಯ ಅಲ್ಮೇರಾದಲ್ಲಿ ಸಂಗ್ರಹಿಸಿಡಲಾಗಿತ್ತು. ಸೋಮವಾರ ರಾತ್ರಿ ರೈತ ಸಂಪರ್ಕ ಕೇಂದ್ರದ ಒಳಗೆ ನುಗ್ಗಿ, ಕಚೇರಿ ಕೋಣೆ ಬಾಗಿಲು ಮುರಿದು ಅಲ್ಮೇರಾ ಒಡೆದು ಹಣ ದೋಚಲಾಗಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಮಾಹಿತಿ ನೀಡಿದರು.</p>.<p>ಕಚೇರಿ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪ್ರಸ್ತುತ ಅದು ಸಕ್ರಿಯವಾಗಿಲ್ಲ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>