ಅಂದಹಾಗೆ ತಾಲ್ಲೂಕಿನ ಡೊಣ್ಣೂರ, ಹೆಬ್ಬಾಳ, ತೆಂಗಳಿ, ಕಲಗುರ್ತಿ, ಮಲಘಾಣ, ಕಣಸೂರ, ಕಂದಗೂಳ, ಹುಳಗೇರಾ, ಗೋಟೂರ, ನಿಪ್ಪಾಣಿ ಗ್ರಾಮದ ಒಟ್ಟು 1,412 ಮನೆಗಳ ಒಳಗೆ ನೀರು ನುಗ್ಗಿದೆ. ಹಾಗೆ 28 ಮನೆಗಳು ಉರುಳಿ ಬಿದ್ದಿವೆ. ಆರು ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆದು 1600 ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. 103 ಕುರಿ, 135 ಕೋಳಿ, 200 ಹಂದಿ ಸಾವನ್ನಪ್ಪಿವೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.