ವಿಧಾನಸಭೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬಿಪಿಎಲ್ ಪಡಿತರ ರದ್ದು ಪಡಿಸಿದ್ದಲ್ಲದೆ, ₹5.09 ಲಕ್ಷ ದಂಡ ವಿಧಿಸಲಾಗಿದೆ. ಪಡಿತರ ಕಾರ್ಡ್ ಪಡೆಯಲು ಕಠಿಣ ಮಾನದಂಡಗಳನ್ನು ವಿಧಿಸಲಾಗಿದೆ. ತಪ್ಪು ಮಾಹಿತಿ ಕೊಟ್ಟು ಆದ್ಯತೆ ಮೇರೆಗೆ ಪಡಿತರ ಪಡೆದಂತಹ ಸಾವಿರಾರು ಜನರನ್ನು ಗುರುತಿಸಲಾಗಿದ್ದು, ಕಠಿಣ ಕ್ರಮದ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ’ ಎಂದಿದ್ದಾರೆ.