ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ | ಕೆರೆ ನಿರ್ವಹಣೆ ಕೊರತೆ: ಸುಸಜ್ಜಿತ ಮೀನು ಮಾರುಕಟ್ಟೆಯೂ ಇಲ್ಲ

ಕಲಬುರಗಿ ಜಿಲ್ಲೆಯ 82 ಕೆರೆಗಳಲ್ಲಿ 10,500 ಮಂದಿ ಮೀನುಗಾರಿಕೆಯಲ್ಲಿ ಭಾಗಿ
ಲಕ್ಷ್ಮಣ ಟಿ. ನಾಯ್ಕ
Published : 26 ಆಗಸ್ಟ್ 2024, 5:28 IST
Last Updated : 26 ಆಗಸ್ಟ್ 2024, 5:28 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದಲ್ಲಿ ಮೀನುಗಾರರೊಬ್ಬರು ಮೀನುಗಾರಿಕೆಯಲ್ಲಿ ತೊಡಗಿರುವುದು
ಚಿಂಚೋಳಿ ತಾಲ್ಲೂಕು ನಾಗರಾಳ ಜಲಾಶಯದಲ್ಲಿ ಮೀನುಗಾರರೊಬ್ಬರು ಮೀನುಗಾರಿಕೆಯಲ್ಲಿ ತೊಡಗಿರುವುದು
ಕಲಬುರಗಿಯ ಬಹಮನಿ ಕೋಟೆಯ ಬಳಿ ಶನಿವಾರ ಸಂತೆಯಲ್ಲಿ ಮಹಿಳೆಯರು ಮೀನು ಮಾರಾಟ ಮಾಡುತ್ತಿರುವುದು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಬಹಮನಿ ಕೋಟೆಯ ಬಳಿ ಶನಿವಾರ ಸಂತೆಯಲ್ಲಿ ಮಹಿಳೆಯರು ಮೀನು ಮಾರಾಟ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಮಳೆಗಾಲದಲ್ಲಿ ಕೆರೆಗಳಲ್ಲಿ ನೀರು ತುಂಬಿಕೊಂಡಾಗ ಮೀನುಗಾರಿಕೆ ಮಾಡಲು ಸರ್ಕಾರ ಸಹಾಯ ಮಾಡಬೇಕು. ಅದರ ಬಗ್ಗೆ ತರಬೇತಿ ರೈತರಿಗೆ ನೀಡಬೇಕು
ಸಿದ್ದು ಧಣ್ಣೂರು ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ
ಜಯಲಕ್ಷ್ಮಿ ಮೀನುಗಾರರ ಸಹಕಾರ ಸಂಘದಲ್ಲಿ 91 ಜನ ಸದಸ್ಯರಿದ್ದೇವೆ. ನಮಗೆ ಮೀನುಗಾರಿಕೆ ಬಿಟ್ಟರೆ ಬೇರೆ ಉದ್ಯೋಗ ಬರುವುದಿಲ್ಲ. ನಾಗರಾಳ ಜಲಾಶಯ ನಮ್ಮ ಕುಟುಂಬಗಳಿಗೆ ಆಧಾರವಾಗಿದೆ
ಈಶ್ವರ್ ನರನಾಳ ಅಧ್ಯಕ್ಷರು ಜಯಲಕ್ಷ್ಮಿ ಮೀನುಗಾರರ ಸಹಕಾರ ಸಂಘ
ಕೆರೆಗಳಲ್ಲಿನ ಹೂಳು ತೆಗೆಯದಿರುವುದೇ ಸಮಸ್ಯೆ
ಅಫಜಲಪುರ ತಾಲೂಕಿನಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಮತ್ತು ಸಣ್ಣ ನೀರಾವರಿ ಇಲಾಖೆ ಮುಖಾಂತರ ಕೆರೆ ನಿರ್ಮಾಣ ಮಾಡಲಾಗಿದೆ. ಕರಜಗಿ ಆತನೂರು ಅಫಜಲಪುರ ಸಂಪರ್ಕ ಕೇಂದ್ರಗಳಲ್ಲಿಯೂ ಕೆರೆಗಳಿದ್ದು ಅದರಲ್ಲಿ ಗೊಬ್ಬೂರು (ಕೆ) ಕೆರೆಯಲ್ಲಿ ಮಾತ್ರ ನಿರಂತರವಾಗಿ ನೀರು ಸಂಗ್ರಹವಾಗುತ್ತದೆ. ಉಳಿದ ಕೆರೆಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಇದರಿಂದ ಮೀನುಗಾರಿಕೆ ಮಾಡುವುದು ಕಷ್ಟವಾಗುತ್ತಿದೆ. ತಾಲ್ಲೂಕಿನ ಬಡದಾಳ ಬಳೂರ್ಗಿ ನಿಲೂರ ರೇವೂರ (ಬಿ) ಮಾಶಾಳ ಮಣ್ಣೂರ ಬಿದನೂರ ನಂದರಗಾದಲ್ಲಿ ಕಳೆದ ಎಂಟು ವರ್ಷದಲ್ಲಿ ತಾಲ್ಲೂಕಿನಲ್ಲಿ 9 ಕೆರೆಗಳನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನೆಯ ಅಡಿ ಹೂಳೆತ್ತುವ ಕೆಲಸ ಮಾಡಲಾಗುತ್ತಿದೆ. ‘ಕೆರೆಗಳ ಅಭಿವೃದ್ಧಿ ಮಾಡುವುದರಿಂದ ಮಳೆಗಾಲದಲ್ಲಿ ನೀರು ನಿಲ್ಲುವಂತಾಗಿದೆ. ಮಂದಿನ ವರ್ಷ ಬಡದಾಳ ಗ್ರಾಮದಲ್ಲಿ ಇನ್ನೊಂದು ಕೆರೆ ಹೂಳೆತ್ತುವ ಯೋಜನೆ ಹಾಕಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 35 ಕೆರೆ ಹೂಳೆತ್ತುವ ಕೆಲಸ ಮಾಡಲಾಗುವುದು’ ಎನ್ನುತ್ತಾರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಅಧಿಕಾರಿ ಶಿವಾರಾಜ ಅಚಾರ್ಯ. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಾಂತಪ್ಪ ಜಾಧವ್ ಮಾತನಾಡಿ ಸಣ್ಣ ನೀರಾವರಿ ಇಲಾಖೆ ಮುಖಾಂತರ ತಾಲೂಕಿನಲ್ಲಿ ಗೊಬ್ಬೂರು (ಕೆ) ಗ್ರಾಮದ ಕೆರೆಯಲ್ಲಿ ಮಾತ್ರ 12 ತಿಂಗಳು ನೀರು ಸಂಗ್ರವಿರುತ್ತದೆ. ಉಳಿದ ಕೆರೆಗಳು ನೀರು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಉಡಚಣ ಗ್ರಾಮದಲ್ಲಿ ಮಾತ್ರ ನದಿಯಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ನಿರಂತರವಾಗಿ ನೀರು ಸಂಗ್ರವಾದರೆ ಮೀನುಗಾರಿಕೆ ಮಾಡಲು ಅನುಕೂಲವಾಗುತ್ತದೆ’ ಎಂದು ಹೇಳುತ್ತಾರೆ.
14 ಕೆರೆಗಳಲ್ಲಿ ಮೀನುಗಾರಿಕೆ
ಚಿಂಚೋಳಿ: ಅರೆಮಲೆನಾಡು ಪ್ರದೇಶದಲ್ಲಿ ಬರುವ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶಗಳಿವೆ. ತಾಲ್ಲೂಕಿನಲ್ಲಿ ಬೃಹತ್ ನೀರಾವರಿ ಯೋಜನೆಯ ಎರಡು ಜಲಾಶಯಗಳು ಮತ್ತು 14 ಸಣ್ಣ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. ನಾಗರಾಳ ಜಲಾಶಯದಲ್ಲಿ ಮೀನುಗಾರಿಕೆ ನಡೆಸಲು ನರನಾಳ ಗ್ರಾಮದ ಜಯಲಕ್ಷ್ಮಿ ಸಹಕಾರ ಸಂಘಕ್ಕೆ ಸಣ್ಣ ನೀರಾವರಿ ಇಲಾಖೆಯ ಚಂದನಕೇರಾ ಮತ್ತು ಹುಲ್ಸಗೂಡ ಕೆರೆಯ ಮೀನುಗಾರಿಕೆ ಬೆಡಸೂರಿನ ಮೀನುಗಾರರ ಸಂಘಕ್ಕೆ ನೇರಗುತ್ತಿಗೆ ನೀಡಲಾಗಿದೆ. ಚಂದ್ರಂಪಳ್ಳಿ ಜಲಾಶಯ ಹಾಗೂ ಇನ್ನಿತರ ಸಣ್ಣ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆಗೆ ಟೆಂಡರ್ ಕರೆದು ಗುತ್ತಿಗೆ ನೀಡುವ ಪದ್ಧತಿ ಜಾರಿಯಲ್ಲಿದೆ. ಮೀನುಗಾರಿಕೆಯಿಂದ ಸರ್ಕಾರಕ್ಕೆ ₹ 31 ಲಕ್ಷ ರೂಪಾಯ ವಾರ್ಷಿಕ ವರಮಾನ ಬರುತ್ತಿದೆ. ಕೋಡ್ಲಿ ಬಳಿಯ ಅಲ್ಲಾಪುರ ಕೆರೆಯ ಮೀನುಗಾರಿಕೆಗೆ ಹೆಚ್ಚಿನ ಬೇಡಿಕೆ ಇದೆ. ಈ ಒಂದೇ ಕೆರೆಯಿಂದ ವಾರ್ಷಿಕ ₹ 5 ಲಕ್ಷ ವರಮಾನ ಹರಿದು ಬರುತ್ತಿದೆ. ಬೃಹತ್ ನೀರಾವರಿ ಯೋಜನೆಯ ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯದ ಮೀನುಗಾರಿಕೆಯ ಟೆಂಡರ್ ಮೊತ್ತ ಕಡಿಮೆಯಿದೆ.
ಇಲಾಖೆ ವ್ಯಾಪ್ತಿಯ ಪ್ರಮುಖ ಕೆರೆಗಳು
ಶರಣಬಸವೇಶ್ವರ ಕೆರೆ ಹಾಗರಗುಂಡಗಿ ಕೆರೆ ಭೈರಾಮಡಗಿ ಕೆರೆ ಕೋಡ್ಲಿ ಅಲ್ಲಾಪುರ ಕೆರೆ ಅಲಿಪುರ ಕೆರೆ ಓಕಳಿ ಕೆರೆ ನವನಿಹಾಳ ಕೆರೆ ಗೊಬ್ಬೂರು ಕೆರೆ ಖಾಜಾ ಕೋಟನೂರು ಕೆರೆ ವೈಜಾಪುರ ಕೆರೆ ** ಜಲಾಶಯಗಳು ಬೆಣ್ಣೆತೊರಾ ಜಲಾಶಯ ಗಂಡೋರಿ ಜಲಾಶಯ ಅಮರ್ಜಾ ಜಲಾಶಯ ಸೊನ್ನ ಭೀಮಾ ಬ್ಯಾರೇಜ್ ಚಂದ್ರಂಪಳ್ಳಿ ಜಲಾಶಯ ನಾಗರಾಳ ಜಲಾಶಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT