<p><strong>ಕಲಬುರಗಿ:</strong> ‘ಅಭಿಧಮ್ಮ ಪಿಟಕ ಬೌದ್ಧ ವಿಹಾರಗಳಲ್ಲಿ ಭಿಕ್ಕುಗಳು ಧ್ಯಾನದ ಮೂಲಕ ಅಭಿಧಮ್ಮವನ್ನು ಬೋಧಿಸುತ್ತಾರೆ. ಅಭಿ ಎಂದರೆ ಉನ್ನತವಾದುದು ಎಂದರ್ಥ. ಅಭಿಧಮ್ಮವನ್ನು ಅಚಾರ್ಯ ಬುದ್ಧಘೋಷರು, ವಿಶೇಷಧಮ್ಮ ಎಂದು ಕರೆದಿದ್ದ, ಥೇರವಾದ ಬೌದ್ಧಧರ್ಮೀಯರು ಈ ಪಿಟಕವನ್ನು ಬೌದ್ಧ ಸಿದ್ಧಾಂತದ ಶ್ರೇಷ್ಠ ಹೂವೆಂದು ಪರಿಗಣಿಸಿದ್ದಾರೆ’ ಎಂದು ಬೌದ್ಧ ವಿದ್ವಾಂಸ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಹೇಳಿದರು.</p>.<p>ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ನಡೆದ ಬೌದ್ಧ ತ್ರಿಪಿಟಕಗಳ ಅನುಸಂಧಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಸಮ್ಮಾಸಂಬುದ್ಧನಿಗೆ ಮಾತ್ರ ಹೊಳೆಯಬಹುದಾದ ನಿಖರ, ಸ್ಪಷ್ಟ, ಅನುಭವ ಭೂಮಿಕೆಯಿಂದ ಹೊರಟ ಜ್ಞಾನ ಈ ಅಭಿಧಮ್ಮದಲ್ಲಿದೆ. ಅದವೇ ಸಬ್ಬ ಜ್ಞಾನವಾಗಿದ್ದು, ಅಭಿಧಮ್ಮ ಪಿಟಕ ಮನಃಶಾಸ್ತ್ರ ಗ್ರಂಥ’ ಎಂದು ಅಭಿಪ್ರಾಯಪಟ್ಟರು.</p>.<p>ವಿದ್ವಾಂಸ ಶರತ್ಚಂದ್ರಸ್ವಾಮಿ ಮಾತನಾಡಿ, ‘ವಿನಯಪಿಟಕ ಭಿಕ್ಕು ಸಂಘದ ನಿಯಮಾವಳಿಗನ್ನು ಕುರಿತು ಉಪದೇಶ ನೀಡುತ್ತದೆ. ವಿನಯಪಿಟಕ ಆಜ್ಞೋಪದೇಶವಾಗಿದೆ. ಬೌದ್ಧ ಭಿಕ್ಕುಗಳಿಗೂ ವರ್ಷಾವಾಸ ಮಾಡುವುದು ಕಡ್ಡಾವಾಗಿತ್ತು. ವಿನಯಪಿಟಕದಲ್ಲಿ ಸುತ್ತವಿಭಂಗ, ಖಂದಕ ವಿಭಂಗದಂತಹ ವಿಭಾಗಗಳಿವೆ’ ಎಂದರು.</p>.<p>ನಾಲ್ಕು ಪಾರಾಜಿತಗಳು, ಸಂಘಾಧಿಶೇಷಗಳು, ಅನಿಯಮಧಮ್ಮಗಳು, ನಿಸರ್ಗಿಯ ಧಮ್ಮಗಳುಭಿಕ್ಕುಗಳ ಆಸೆ, ವ್ಯಾಮೋಹ, ಅಪರಾಧಗಳಿಂದ ಮುಕ್ತರಾಗಿ ಸರಳ ಜೀವನ ನಡೆಸಬೇಕೆಂಬುದಾಗಿ ಭಗವಾನ್ ಬುದ್ಧ ಬೋಧಿಸಿದ್ದಾರೆ ಎಂದು ಹೇಳಿದರು. </p>.<p>ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು. ಪ್ರೊ. ಎಚ್.ಟಿ. ಪೋತೆ ಮಾತನಾಡಿದರು. ಕೆ.ಪಿ. ರಾವ್, ಪಾಲಿ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಅಭಿಧಮ್ಮ ಪಿಟಕ ಬೌದ್ಧ ವಿಹಾರಗಳಲ್ಲಿ ಭಿಕ್ಕುಗಳು ಧ್ಯಾನದ ಮೂಲಕ ಅಭಿಧಮ್ಮವನ್ನು ಬೋಧಿಸುತ್ತಾರೆ. ಅಭಿ ಎಂದರೆ ಉನ್ನತವಾದುದು ಎಂದರ್ಥ. ಅಭಿಧಮ್ಮವನ್ನು ಅಚಾರ್ಯ ಬುದ್ಧಘೋಷರು, ವಿಶೇಷಧಮ್ಮ ಎಂದು ಕರೆದಿದ್ದ, ಥೇರವಾದ ಬೌದ್ಧಧರ್ಮೀಯರು ಈ ಪಿಟಕವನ್ನು ಬೌದ್ಧ ಸಿದ್ಧಾಂತದ ಶ್ರೇಷ್ಠ ಹೂವೆಂದು ಪರಿಗಣಿಸಿದ್ದಾರೆ’ ಎಂದು ಬೌದ್ಧ ವಿದ್ವಾಂಸ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಹೇಳಿದರು.</p>.<p>ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ನಡೆದ ಬೌದ್ಧ ತ್ರಿಪಿಟಕಗಳ ಅನುಸಂಧಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ಸಮ್ಮಾಸಂಬುದ್ಧನಿಗೆ ಮಾತ್ರ ಹೊಳೆಯಬಹುದಾದ ನಿಖರ, ಸ್ಪಷ್ಟ, ಅನುಭವ ಭೂಮಿಕೆಯಿಂದ ಹೊರಟ ಜ್ಞಾನ ಈ ಅಭಿಧಮ್ಮದಲ್ಲಿದೆ. ಅದವೇ ಸಬ್ಬ ಜ್ಞಾನವಾಗಿದ್ದು, ಅಭಿಧಮ್ಮ ಪಿಟಕ ಮನಃಶಾಸ್ತ್ರ ಗ್ರಂಥ’ ಎಂದು ಅಭಿಪ್ರಾಯಪಟ್ಟರು.</p>.<p>ವಿದ್ವಾಂಸ ಶರತ್ಚಂದ್ರಸ್ವಾಮಿ ಮಾತನಾಡಿ, ‘ವಿನಯಪಿಟಕ ಭಿಕ್ಕು ಸಂಘದ ನಿಯಮಾವಳಿಗನ್ನು ಕುರಿತು ಉಪದೇಶ ನೀಡುತ್ತದೆ. ವಿನಯಪಿಟಕ ಆಜ್ಞೋಪದೇಶವಾಗಿದೆ. ಬೌದ್ಧ ಭಿಕ್ಕುಗಳಿಗೂ ವರ್ಷಾವಾಸ ಮಾಡುವುದು ಕಡ್ಡಾವಾಗಿತ್ತು. ವಿನಯಪಿಟಕದಲ್ಲಿ ಸುತ್ತವಿಭಂಗ, ಖಂದಕ ವಿಭಂಗದಂತಹ ವಿಭಾಗಗಳಿವೆ’ ಎಂದರು.</p>.<p>ನಾಲ್ಕು ಪಾರಾಜಿತಗಳು, ಸಂಘಾಧಿಶೇಷಗಳು, ಅನಿಯಮಧಮ್ಮಗಳು, ನಿಸರ್ಗಿಯ ಧಮ್ಮಗಳುಭಿಕ್ಕುಗಳ ಆಸೆ, ವ್ಯಾಮೋಹ, ಅಪರಾಧಗಳಿಂದ ಮುಕ್ತರಾಗಿ ಸರಳ ಜೀವನ ನಡೆಸಬೇಕೆಂಬುದಾಗಿ ಭಗವಾನ್ ಬುದ್ಧ ಬೋಧಿಸಿದ್ದಾರೆ ಎಂದು ಹೇಳಿದರು. </p>.<p>ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು. ಪ್ರೊ. ಎಚ್.ಟಿ. ಪೋತೆ ಮಾತನಾಡಿದರು. ಕೆ.ಪಿ. ರಾವ್, ಪಾಲಿ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>