ವರ್ಧಮಾನೆ ದಂಪತಿ ಗಾಂಧಿನಗರ ಕಮಾನು ಸಮೀಪ ಕಂಪನಿಯ ಕಚೇರಿ ತೆರೆದಿದ್ದರು. ₹ 1 ಲಕ್ಷ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ₹ 2 ಲಕ್ಷ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ್ದ ಶಿಕ್ಷಕ ವೀರೇಶ ಭೀಮಾಶಂಕರ ಅವರು ಹಂತ ಹಂತವಾಗಿ ₹ 5.50 ಲಕ್ಷ ಹಣವನ್ನು ವರ್ಧಮಾನೆ ಅವರಿಗೆ ಕೊಟ್ಟಿದ್ದರು. ವೀರೇಶ ಅವರಂತೆ ಮಹಮದ್ ಇಬ್ರಾಹಿಂ, ಗುಂಡಪ್ಪ ವಾರದ್, ಚಂದ್ರಕಾಂತ ರಾಠೋಡ್ ಸೇರಿ ಹಲವರಿಂದ ಒಂದು ವರ್ಷದಲ್ಲಿ ₹ 1 ಕೋಟಿಗೂ ಅಧಿಕ ಹಣವನ್ನು ವರ್ಧಮಾನೆ ದಂಪತಿ ಪಡೆದಿದ್ದಾರೆ ಎಂದು ಸಂತ್ರಸ್ತರು ದೂರು ಕೊಟ್ಟಿದ್ದಾರೆ.