<p><strong>ಕಲಬುರಗಿ:</strong> ಒಂದು ವರ್ಷದಲ್ಲಿ ಹಣ ದುಪ್ಪಟ್ಟು ಮಾಡಿಕೊಡುವ ಆಮಿಷಯೊಡ್ಡಿದ ದಂಪತಿ, ಶಿಕ್ಷಕ ಸೇರಿದಂತೆ ಹಲವರಿಂದ ₹ 30 ಕೋಟಿ ಪಡೆದು ಪರಾರಿಯಾದ ಆರೋಪದಡಿ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಕ್ಯಾಪಿಟಲ್ ಗ್ರೋ ಲರ್ನ್’ ಟ್ರೇಡಿಂಗ್ ಕಂಪನಿ ಮಾಲೀಕರಾದ ಉತ್ಕರ್ಷ ವರ್ಧಮಾನೆ ಮತ್ತು ಸಾವಿತ್ರಿ ವರ್ಧಮಾನೆ, ಪರಾರಿಯಾಗಲು ಸಹಕರಿಸಿದ ಆರೋಪದಡಿ ಸುಧಾ ಠಾಕೂರ ಮತ್ತು ಸಂಬಂಧಿ ವಿಜಯಸಿಂಗ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ವರ್ಧಮಾನೆ ದಂಪತಿ ಗಾಂಧಿನಗರ ಕಮಾನು ಸಮೀಪ ಕಂಪನಿಯ ಕಚೇರಿ ತೆರೆದಿದ್ದರು. ₹ 1 ಲಕ್ಷ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ₹ 2 ಲಕ್ಷ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ್ದ ಶಿಕ್ಷಕ ವೀರೇಶ ಭೀಮಾಶಂಕರ ಅವರು ಹಂತ ಹಂತವಾಗಿ ₹ 5.50 ಲಕ್ಷ ಹಣವನ್ನು ವರ್ಧಮಾನೆ ಅವರಿಗೆ ಕೊಟ್ಟಿದ್ದರು. ವೀರೇಶ ಅವರಂತೆ ಮಹಮದ್ ಇಬ್ರಾಹಿಂ, ಗುಂಡಪ್ಪ ವಾರದ್, ಚಂದ್ರಕಾಂತ ರಾಠೋಡ್ ಸೇರಿ ಹಲವರಿಂದ ಒಂದು ವರ್ಷದಲ್ಲಿ ₹ 1 ಕೋಟಿಗೂ ಅಧಿಕ ಹಣವನ್ನು ವರ್ಧಮಾನೆ ದಂಪತಿ ಪಡೆದಿದ್ದಾರೆ ಎಂದು ಸಂತ್ರಸ್ತರು ದೂರು ಕೊಟ್ಟಿದ್ದಾರೆ.</p>.<p>ಹಣದ ಸುರಕ್ಷತೆಯನ್ನು ನಂಬಿಸಲು ಬಾಂಡ್ ಪೇಪರ್ ಮತ್ತು ಚೆಕ್ಗಳನ್ನು ಕೊಟ್ಟಿದ್ದರು. ಲಾಭಾಂಶ ಸೇರಿ ಯಾವುದೇ ಹಣವನ್ನು ವಾಪಸ್ ಮಾಡದ ದಂಪತಿ, ಮೇ 24ರ ಮಧ್ಯರಾತ್ರಿ ಕಾರಿನಲ್ಲಿ ಪರಾರಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಒಂದು ವರ್ಷದಲ್ಲಿ ಹಣ ದುಪ್ಪಟ್ಟು ಮಾಡಿಕೊಡುವ ಆಮಿಷಯೊಡ್ಡಿದ ದಂಪತಿ, ಶಿಕ್ಷಕ ಸೇರಿದಂತೆ ಹಲವರಿಂದ ₹ 30 ಕೋಟಿ ಪಡೆದು ಪರಾರಿಯಾದ ಆರೋಪದಡಿ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಕ್ಯಾಪಿಟಲ್ ಗ್ರೋ ಲರ್ನ್’ ಟ್ರೇಡಿಂಗ್ ಕಂಪನಿ ಮಾಲೀಕರಾದ ಉತ್ಕರ್ಷ ವರ್ಧಮಾನೆ ಮತ್ತು ಸಾವಿತ್ರಿ ವರ್ಧಮಾನೆ, ಪರಾರಿಯಾಗಲು ಸಹಕರಿಸಿದ ಆರೋಪದಡಿ ಸುಧಾ ಠಾಕೂರ ಮತ್ತು ಸಂಬಂಧಿ ವಿಜಯಸಿಂಗ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ವರ್ಧಮಾನೆ ದಂಪತಿ ಗಾಂಧಿನಗರ ಕಮಾನು ಸಮೀಪ ಕಂಪನಿಯ ಕಚೇರಿ ತೆರೆದಿದ್ದರು. ₹ 1 ಲಕ್ಷ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ₹ 2 ಲಕ್ಷ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ್ದ ಶಿಕ್ಷಕ ವೀರೇಶ ಭೀಮಾಶಂಕರ ಅವರು ಹಂತ ಹಂತವಾಗಿ ₹ 5.50 ಲಕ್ಷ ಹಣವನ್ನು ವರ್ಧಮಾನೆ ಅವರಿಗೆ ಕೊಟ್ಟಿದ್ದರು. ವೀರೇಶ ಅವರಂತೆ ಮಹಮದ್ ಇಬ್ರಾಹಿಂ, ಗುಂಡಪ್ಪ ವಾರದ್, ಚಂದ್ರಕಾಂತ ರಾಠೋಡ್ ಸೇರಿ ಹಲವರಿಂದ ಒಂದು ವರ್ಷದಲ್ಲಿ ₹ 1 ಕೋಟಿಗೂ ಅಧಿಕ ಹಣವನ್ನು ವರ್ಧಮಾನೆ ದಂಪತಿ ಪಡೆದಿದ್ದಾರೆ ಎಂದು ಸಂತ್ರಸ್ತರು ದೂರು ಕೊಟ್ಟಿದ್ದಾರೆ.</p>.<p>ಹಣದ ಸುರಕ್ಷತೆಯನ್ನು ನಂಬಿಸಲು ಬಾಂಡ್ ಪೇಪರ್ ಮತ್ತು ಚೆಕ್ಗಳನ್ನು ಕೊಟ್ಟಿದ್ದರು. ಲಾಭಾಂಶ ಸೇರಿ ಯಾವುದೇ ಹಣವನ್ನು ವಾಪಸ್ ಮಾಡದ ದಂಪತಿ, ಮೇ 24ರ ಮಧ್ಯರಾತ್ರಿ ಕಾರಿನಲ್ಲಿ ಪರಾರಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>